ರಾಜ್ಯ

ಬೆಂಗಳೂರಿನಲ್ಲಿ ಜಲ್ಲಿಕಲ್ಲು ವ್ಯಾಪಾರಿಯ ಭೀಕರ ಕೊಲೆ

Lingaraj Badiger

ಬೆಂಗಳೂರು: ಎಂ ಸ್ಯಾಂಡ್ ಜಲ್ಲಿಕಲ್ಲು ವ್ಯಾಪಾರಿ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ತಲಘಟ್ಟಪುರದ ಆವಲಹಳ್ಳಿಯಲ್ಲಿ ನಡೆದಿದೆ.

ಕೊಲೆಯಾದ ವ್ಯಾಪಾರಿ ಆವಲಹಳ್ಳಿ ನಿವಾಸಿ ಸಾಬೂ(38) ಎಂದು ಗುರುತಿಸಲಾಗಿದೆ.

ಆವಲಹಳ್ಳಿ ಸಮೀಪದ ತಿಂಡಿ ಮನೆ ಹೊಟೇಲ್ ಸಮೀಪ ನಿನ್ನೆ ರಾತ್ರಿ 11.30ರ ಸಮಯದಲ್ಲಿ ಸಾಬೂವಿನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.

ಸಾಬೂ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆತನಿಗೆ ಇಬ್ಬರು ಪತ್ನಿಯರಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಶಂಕಿಸಿರುವ ತಲಘಟ್ಟಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಜರುಗಿಸಿದ್ದಾರೆ.

SCROLL FOR NEXT