ರಾಜ್ಯ

ಮಂಡ್ಯ: ಹಾಡಹಗಲೇ ಜಾನಪದ ಕಲಾವಿದನ ಬರ್ಬರ ಹತ್ಯೆ

Lingaraj Badiger

ಮಂಡ್ಯ: ಹಾಡುಹಾಗಲೇ ಜಾನಪದ ಕಲಾವಿದರೊಬ್ಬರನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾರತೀನಗರ ಸಮೀಪದ ಕೆ.ಶೆಟ್ಟಹಳ್ಳಿಯಲ್ಲಿ ನಡೆದಿದೆ.

ಗ್ರಾಮದ ಪೂಜಾ ಕುಣಿತ ಕಲಾವಿದ ರಘು( ೨೭) ಹತ್ಯೆಯಾದ ದುರ್ದೈವಿ. ಈತ ಮನೆಯಿಂದ ಹುಲ್ಲು ತರಲು ಬೆಳಗ್ಗೆ ೧೦.೩೦ರ ಸಮಯದಲ್ಲಿ ಗ್ರಾಮದ ಹೊರವಲಯದ ಜಮೀನಿನ ಬಳಿ ತೆರಳಿದ್ದ ವೇಳೆ ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆಗೈಯ್ದು ಪರಾರಿಯಾಗಿದ್ದಾರೆ.

ಕೊಲೆಗೆ ಕಾರಣ ತಿಳಿದು ಬಂದಿಲ್ಲ ಕೊಲೆ ಮಾಡಿದ ಆರೋಪಿಗಳ ಸುಳಿವು ದೊರತಿಲ್ಲ. ಗ್ರಾಮದಲ್ಲಿ ಜನರ ಜತೆ ಉತ್ತಮ ಭಾಂದವ್ಯ ಇಟ್ಟು ಕೊಂಡು ರಾಜ್ಯ ಮಟ್ಟದ ಜಾನಪದ ಕಲಾವಿದನಾಗಿ ಪೂಜಾ ಕುಣಿತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತಿದ್ದರು ಎನ್ನಲಾಗಿದೆ. 

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್, ಎಎಸ್‌ಪಿ ಶೋಭರಾಣಿ, ಡಿವೈಎಸ್‌ಪಿ ಪೃಥ್ವಿ, ಸರ್ಕಲ್ ಇನ್ಸ್ಪೆಕ್ಟರ್ ಶಿವಮಲವಯ್ಯ ಬೇಟಿ ನೀಡಿ ಪರಿಶೀಲಿಸಿದರು.

ಈ ಬಗ್ಗೆ ಮೃತನ ತಾಯಿ ನಿಂಗಮ್ಮ ಕೆ.ಎಂ.ದೊಡ್ಡಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಸಬ್ ಇನ್ಸ್ಪೆಕ್ಟರ್ ಶೇಷಾದ್ರಿಕುಮಾರ್ ಮುಂದಿನ ತನಿಖೆ ಕೈಗೊಂಡಿದ್ದಾರೆ.

-ನಾಗಯ್ಯ

SCROLL FOR NEXT