ರಾಜ್ಯ

ಮಂಡ್ಯ: ಚಿತ್ರಹಿಂಸೆಗೆ ನೊಂದು ರಾಡ್‌ನಿಂದ ಹೊಡೆದು ಪತಿ, ಮಾವ, ಅತ್ತೆಯನ್ನು ಕೊಲೆಗೈದ ಸೊಸೆ; ಬೆಚ್ಚಿಬಿದ್ದ ಗ್ರಾಮಸ್ಥರು

Vishwanath S

ಮಂಡ್ಯ: ಕೌಟುಂಬಿಕ ಕಲಹಕ್ಕೆ ಒಂದೇ ಕುಟುಂಬದ ಮೂವರು ಹತ್ಯೆಗೀಡಾಗಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ.

ನಿರಂತರ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬಳು, ಮಲಗಿದ್ದ ಪತಿ, ಅತ್ತೆ ಮತ್ತು ಮಾವನ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆಗೈದ್ದಿದ್ದಾರೆ. ಘಟನೆ ಕೆ.ಆರ್. ಪೇಟೆ ‌ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ವಾರದ ಹಿಂದೆ ಘಟನೆ ನಡೆದಿದ್ದು, ನಿನ್ನೆ ಗಾಯಾಳುಗಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹೆಮ್ಮಡಹಳ್ಳಿಯ ನಿವಾಸಿ, ಮಹಿಳೆಯ ಪತಿ ನಾಗರಾಜು (50), ಮಾವ ವೆಂಕಟೇಗೌಡ(70) ಹಾಗೂ  ಅತ್ತೆ ಕುಳ್ಳಮ್ಮ (60) ಕೊಲೆಯಾದವರು. ಆರೋಪಿ ಮಹಿಳೆ ನಾಗಮಣಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.

SCROLL FOR NEXT