ರಾಜ್ಯ

ಕಲಬುರಗಿ: ಗ್ರಾಮ ಪಂಚಾಯ್ತಿ ಸದಸ್ಯನ ಕೊಲೆ, ನಾಲ್ವರ ಬಂಧನ

Raghavendra Adiga

ಕಲಬುರಗಿ: ಕಲಬುರಗಿ ನಗರದಲ್ಲಿ ಇತ್ತೀಚೆಗೆ ಗ್ರಾಮ ಪಂಚಾಯಿತಿ ಸದಸ್ಯನೋರ್ವನನ್ನು ಕೊಲೆ ಮಾಡಿದ್ದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಆರ್.ಜಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶರಣ ಬಸಪ್ಪ ಮಾದಗುಂಡ, ಯೋಗಿನಾಥ್ ಮಾದಗುಂಡ, ಸಾಯಿನಾಥ ಮಾದಗುಂಡ ಹಾಗೂ ಅಶೋಕ ರಾಜಾಪುರ ಬಂಧಿತ ಆರೋಪಿಗಳು.ಬಂಧಿತರೆಲ್ಲರೂ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದವರು.ಕಲಬುರಗಿಯ ಕೈಲಾಶ ನಗರದಲ್ಲಿ ನ.2ರಂದು ಕಡಗಂಚಿ ಗ್ರಾಮಪಂಚಾಯಿತಿ ಸದಸ್ಯ ಶಿವಲಿಂಗಪ್ಪ ಭೋಗಶೆಟ್ಟಿ ಅವರನ್ನು ಬರ್ಬರ ಹತ್ಯೆಮಾಡಲಾಗಿತ್ತು.

ಹತ್ಯೆಯಾದ ಶಿವಲಿಂಗಪ್ಪ ಕಡಗಂಚಿಯ ಗ್ರಾಪಂಚಾಯಿತಿ ಸದಸ್ಯರಾಗಿದ್ದರು.ಜಮೀನು ವಿವಾದದ ಹಿನ್ನೆಲೆಯಲ್ಲಿ ಅವರನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ನಾಲ್ವರನ್ನು ಬಂಧಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಕಲಬುರಗಿ ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ .
 

SCROLL FOR NEXT