ಗಜನಿ ಕಗ್ಗ ಎಂಬ ಭತ್ತದ ಅಪರೂಪದ ಪ್ರಭೇದ 
ರಾಜ್ಯ

ಜಿಐ ಟ್ಯಾಗ್ ನೊಂದಿಗೆ 'ಗಜನಿ ಕಗ್ಗ'ವನ್ನು ಸಂರಕ್ಷಿಸಬೇಕು: ಜೀವವೈವಿಧ್ಯ ಮಂಡಳಿಯಿಂದ ಕೇಂದ್ರಕ್ಕೆ ಪತ್ರ 

ಈ ಗಜನಿ ಯುದ್ಧ ಮಾಡಲು ಹೋಗುತ್ತಿಲ್ಲ. ಬದಲಾಗಿ ಅದನ್ನು ರಕ್ಷಿಸಬೇಕಾಗಿದೆ! ಹೆಚ್ಚುತ್ತಿರುವ ಹೈಬ್ರಿಡ್ ಪ್ರಭೇದಗಳು ಮತ್ತು ಜಲಚರಗಳಿಂದಾಗಿ ಮರೆತು ಕಳೆದುಹೋಗುತ್ತಿರುವ ಭತ್ತದ ಪ್ರಭೇದವಾದ ಗಜಾನಿ ಕಗ್ಗ ಬೆಳೆಯನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಸರ್ಕಾರವು ಇದಕ್ಕೆ ಭೌಗೋಳಿಕ ಸೂಚ್ಯಂಕ(ಜಿಐ)ಟ್ಯಾಗ್ ನೀಡಲು ಆಶಿಸುತ್ತಿದ್ದಾರೆ.

ಬೆಂಗಳೂರು: ಈ ಗಜನಿ ಯುದ್ಧ ಮಾಡಲು ಹೋಗುತ್ತಿಲ್ಲ. ಬದಲಾಗಿ ಅದನ್ನು ರಕ್ಷಿಸಬೇಕಾಗಿದೆ! ಹೆಚ್ಚುತ್ತಿರುವ ಹೈಬ್ರಿಡ್ ಪ್ರಭೇದಗಳು ಮತ್ತು ಜಲಚರಗಳಿಂದಾಗಿ ಮರೆತು ಕಳೆದುಹೋಗುತ್ತಿರುವ ಭತ್ತದ ಪ್ರಭೇದವಾದ ಗಜಾನಿ ಕಗ್ಗ ಬೆಳೆಯನ್ನು ಸಂರಕ್ಷಿಸಬೇಕಾಗಿದೆ. ಕೇಂದ್ರ ಸರ್ಕಾರವು ಇದಕ್ಕೆ ಭೌಗೋಳಿಕ ಸೂಚ್ಯಂಕ(ಜಿಐ)ಟ್ಯಾಗ್ ನೀಡಲು ಆಶಿಸುತ್ತಿದ್ದಾರೆ.

ಪ್ರಸ್ತುತ ಸ್ಥಳೀಯ ರೈತರು ತಮ್ಮ ಅಸೋಸಿಯೇಷನ್ ಗಳ ಮೂಲಕ ಗಜನಿ ಬೆಳೆಯುವ ಪ್ರದೇಶಗಳನ್ನು ಕಾಪಾಡಿಕೊಳ್ಳಲು ನೋಡುತ್ತಿದ್ದಾರೆ. ಕಣ್ಮರೆಯಾಗುತ್ತಿರುವ ಈ ಭತ್ತದ ಪ್ರಭೇದವನ್ನು ಬೆಳೆದು ಸಂರಕ್ಷಿಸಲು ರೈತರು ಸರ್ಕಾರವನ್ನು ಬೀಜವನ್ನು ಒದಗಿಸುವಂತೆ ಕೇಳುತ್ತಿದ್ದಾರೆ.

ಕರ್ನಾಟಕ ಜೀವವೈವಿಧ್ಯ ನಿಗಮ(ಕೆಬಿಬಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗಜನಿ ಕಗ್ಗ ಪ್ರಭೇದಕ್ಕೆ ಜಿಐ ಟ್ಯಾಗ್ ನೀಡಬೇಕೆಂದು ಶಿಫಾರಸು ಮಾಡಿದೆ. ಇದನ್ನು ಸದ್ಯ ಉತ್ತರ ಕನ್ನಡದ ಕುಮಟಾ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಲವಣಯುಕ್ತ-ಸಹಿಷ್ಣು ವಿಧವು ಕರಾವಳಿ ಪ್ರದೇಶಗಳಿಗೆ ವಿಶಿಷ್ಟವಾಗಿದೆ.

ಜೀವವೈವಿಧ್ಯ ನಿಗಮದ ಅಧ್ಯಕ್ಷ ಅನಂತ್ ಹೆಗ್ಡೆ ಅಶಿಸರ, ಈ ವೈವಿಧ್ಯತೆಯ ಅನನ್ಯತೆ ಮತ್ತು ಅದು ಎದುರಿಸುತ್ತಿರುವ ಉಳಿಯುವಿಕೆಯ ಹೋರಾಟದಿಂದಾಗಿ ಮಂಡಳಿ ಈ ನಿರ್ಧಾರವನ್ನು ತೆಗೆದುಕೊಂಡಿತು. ಇದಕ್ಕೆ ರಕ್ಷಣೆ ಮತ್ತು ಮಾನ್ಯತೆ ಬೇಕು, ಈ ಪ್ರದೇಶದ ಕೃಷಿ-ಜೀವವೈವಿಧ್ಯತೆಯಿಂದಾಗಿ ಜಿಐ ಟ್ಯಾಗ್ ನೀಡುವಂತೆ ನಾವು ವಾಣಿಜ್ಯ ಸಚಿವಾಲಯವನ್ನು ಕೇಳಿದ್ದು, ಇದು ಹೆಚ್ಚು ಅಗತ್ಯವಾಗಿದೆ ಎಂದು ಕುಮಟಾದ ತಜ್ಞರು ಹೇಳಿದ್ದಾರೆ ಎಂದು ತಿಳಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನೆ ಸಂಸ್ಥೆ (ಎಂಪ್ರಿ) ತನ್ನ ಕೃಷಿ-ವೈವಿಧ್ಯತೆಯ ವರದಿಯಲ್ಲಿ, ಎಂಟು ವರ್ಷಗಳ ಹಿಂದೆ ಭತ್ತದ ವಿಶಿಷ್ಟ ಪ್ರಭೇದಗಳ ಬಗ್ಗೆ ಸಿದ್ಧಪಡಿಸಿದೆ, ಗಜನಿ ಕಗ್ಗವನ್ನು ಪಟ್ಟಿ ಮಾಡಿದೆ, ಅದಕ್ಕೆ ರಕ್ಷಣೆ ಬೇಕು ಎಂದು ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

SCROLL FOR NEXT