ರಾಜ್ಯ

ಇನ್ಮುಂದೆ ಬಿಬಿಎಂಪಿ ಆಸ್ತಿಗಳ ವಿವರ ಆನ್‌ಲೈನ್ ನಲ್ಲಿ ಲಭ್ಯ

ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಆಸ್ತಿ ದಾಖಲೆಗಳ ನಿರ್ವಹಣಾ ವ್ಯವಸ್ಥೆಯ ಸಂಗ್ರಹಾಗಾರವಾದ ಇ-ಆಸ್ಥಿ ಪೋರ್ಟಲ್ ಅನ್ನು ಕಂದಾಯ ಇಲಾಖೆ ಸಹಯೋಗದಲ್ಲಿ ಬೃಹತ್ ಬೆಂಗಳೂರು ಮಹಗಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರ ಬಿಡುಗಡೆ ಮಾಡಿದೆ.

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಆಸ್ತಿ ದಾಖಲೆಗಳ ನಿರ್ವಹಣಾ ವ್ಯವಸ್ಥೆಯ ಸಂಗ್ರಹಾಗಾರವಾದ ಇ-ಆಸ್ಥಿ ಪೋರ್ಟಲ್ ಅನ್ನು ಕಂದಾಯ ಇಲಾಖೆ ಸಹಯೋಗದಲ್ಲಿ ಬೃಹತ್ ಬೆಂಗಳೂರು ಮಹಗಾನಗರ ಪಾಲಿಕೆ (ಬಿಬಿಎಂಪಿ) ಶುಕ್ರವಾರ ಬಿಡುಗಡೆ ಮಾಡಿದೆ.

ಪ್ರಾಯೋಗಿಕ ಆಧಾರದ ಮೇಲೆ, ಮೊದಲು ಮೂರು ವಾರ್ಡ್ ಗಳಾದ ಶಾಂತಾಲಾ ನಗರ (ವಾರ್ಡ್ ಸಂಖ್ಯೆ 111), ನೀಲಸಂದ್ರ (116) ಮತ್ತು ಶಾಂತಿನಗರ (117) ಗಳಲ್ಲಿ ಶುಕ್ರವಾರದಿಂದ. ಎರಡು ವಾರಗಳ ಪ್ರಾಯೋಗಿಕ ಚಾಲನೆ ಇರಲಿದೆ. ಆ ನಂತರ , ಇದು ಇನ್ನೂ 97 ವಾರ್ಡ್‌ಗಳಲ್ಲಿ ಸಕ್ರುಯವಾಗಲಿದೆ. ಒಟ್ಟಾರೆಯಾಗಿ, ಮೊದಲ ಹಂತದಲ್ಲಿ, ಇದನ್ನು 100 ವಾರ್ಡ್‌ಗಳಲ್ಲಿ ಪ್ರಾರಂಭಿಸಲಾಗುತ್ತಿದ್ದು ಮುಂದಿನ ದಿನಗಳಲಿ ಎಲ್ಲಾ 198 ವಾರ್ಡ್ ಗಳ ವ್ಯಾಪ್ತಿಗೆ ವಿಸ್ತರಿಸಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದರು.

ಸಲಹೆಗಳು, ಪ್ರತಿಕ್ರಿಯೆ ಮತ್ತು ಕಾಮೆಂಟ್‌ಗಳನ್ನು ಪೋಸ್ಟ್ ಮಾಡಲು ನಾಗರಿಕರು ಪೋರ್ಟಲ್ ಅನ್ನು ಬಳಸಬಹುದು, ಇದರ ಆಧಾರದಲ್ಲಿ ಪೋರ್ಟಲ್ ಅನ್ನು ಸುಧಾರಣೆ ಮಾಡಲಾಗುತ್ತದೆ. ಅಲ್ಲದೆ ಹೆಚ್ಚಿನ ವಾರ್ಡ್‌ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಎಲ್ಲಾ ಆಸ್ತಿಗಳು ಮತ್ತು ಖತಾಗಳ ಅಸ್ತಿತ್ವದಲ್ಲಿರುವ ಡೇಟಾಬೇಸ್ ಅನ್ನು ಕಂದಾಯ ಇಲಾಖೆಯ ದಾಖಲೆಗಳೊಂದಿಗೆ ವಿಲೀನಗೊಳಿಸಲಾಗಿದ್ದು ಇದರೊಂದಿಗೆ, ನಾಗರಿಕರು ಇತರ ಸೇವೆಗಳ ಹೊರತಾಗಿ ಎಲ್ಲಾ ಆಸ್ತಿ ವಿವರಗಳು, ಖಾಟಾ ವಿವರಗಳು, ಖಾಟಾ ವರ್ಗಾವಣೆ ಮತ್ತು ನೋಂದಣಿಗಳನ್ನು ಪ್ರವೇಶಿಸಿ ಖಾತರಿಪಡಿಸಿಕೊಳ್ಳಬಹುದು ಎಂದು ಆಯುಕ್ತರು ಹೇಳಿದ್ದಾರೆ.

ಎಲ್ಲಾ ಆಸ್ತಿಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನ್ಯಾಯವ್ಯಾಪ್ತಿ-ವೈಸ್ ಲಾಗ್-ಇನ್‌ಗಳನ್ನು ರಚಿಸಲಾಗಿದೆ ಮತ್ತು ಜನರು ಸುಲಭವಾಗಿ ಭರ್ತಿ ಮಾಡಲು ಫಾರ್ಮ್‌ಗಳನ್ನು ಅಪ್‌ಲೋಡ್ ಮಾಡಲಾಗಿದೆ. ತೆರಿಗೆ ಪಾವತಿಸಿದ ವಿವರಗಳನ್ನು ಪಡೆಯಲು ಇ-ಆಸ್ತಿಯನ್ನು ಆಸ್ತಿ ತೆರಿಗೆ ಅರ್ಜಿಯೊಂದಿಗೆ ಸಂಯೋಜಿಸಲಾಗಿದೆ. ಪ್ರತಿಯೊಂದು ಆಸ್ತಿಗೂ ಜಿಐಎಸ್ ಸಾಫ್ಟ್‌ವೇರ್‌ಗೆ ಸಂಯೋಜಿಸಲಾಗಿದೆ.

ಇದರೊಂದಿಗೆ ಎಲ್ಲಾ ಹೊಸ ನೋಂದಣಿಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು. ಸರ್ವೆ ಸಂಖ್ಯೆಯಲ್ಲಿರುವ ಯಾವುದೇ ಬದಲಾವಣೆಗಳನ್ನು ಇ-ಆಸ್ಥಿಯಲ್ಲಿಯೂ ಅಪ್‌ಲೋಡ್ ಮಾಡಲಾಗುತ್ತದೆ. ಬಿಬಿಎಂಪಿ ಮತ್ತು ಕಂದಾಯ ಇಲಾಖೆಯು 203 ನಗರ ಸ್ಥಳೀಯ ಸಂಸ್ಥೆಗಳಲ್ಲಿ, 10 ನಿಗಮಗಳು ಈಗಾಗಲೇ ಇದನ್ನು ಜಾರಿಗೊಳಿಸುತ್ತಿವೆ ಮತ್ತು ಈ ಸೇವೆಯನ್ನು ಬಳಸಿಕೊಂಡು ಈವರೆಗೆ 12.5 ಲಕ್ಷ ದಾಖಲೆಗಳನ್ನು ನೀಡಲಾಗಿದೆ, ಆದರೆ ಐದು ಲಕ್ಷ ಆಸ್ತಿಗಳ ರೂಪಾಂತರವನ್ನು ಈಗಾಗಲೇ ಮಾಡಲಾಗಿದೆ ಎಂದು ಆಯುಕ್ತರು ವಿವರಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT