ರಾಜ್ಯ

ಗಡಿ ತಂಟೆ, ಡಿಸಿಎಂ ಅಜಿತ್ ಪವಾರ್ ವಿರುದ್ಧ ಪ್ರಭು ಚವ್ಹಾಣ್ ಆಕ್ರೋಶ

Manjula VN

ಗದಗ: ಬೆಳಗಾವಿ ನಮ್ಮದು ಎಂಬ ಉದ್ಧಟತನದ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ವಿರುದ್ಧ ಪಶುಸಂಗೋಪನ ಸಚಿವ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ಶುಕ್ರವಾರ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದ ಒಂದು ಇಂಚು ಜಾಗವನ್ನು ಬೇರೆಯವರಿಗೆ ಬಿಟ್ಟುಕೊಡುವುದಿಲ್ಲ ಎಂದರು. 

ಕರ್ನಾಟಕದ ನೆಲ ನಮ್ಮದು ಅನ್ನುವುದು ಅವರ ದಡ್ಡತನ, ಮೂರ್ಖತನದ ಪರಮಾವಧಿ. ಅಜಿತ್ ಪವಾರ್ ರಾತ್ರೋರಾತ್ರಿ ನಾಯಕರಾದವರು ಅಂಥವರ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಬಗ್ಗೆ ಸಾಂಗ್ಲಿ, ಸೊಲ್ಲಾಪುರಕ್ಕೆ ಬಂದು ಅಜಿತ್ ಪವಾರ್ ಮಾತನಾಡುತ್ತಾರೆ . ಅವರಿಗೆ ನಿಜವಾಗಿ ಧೈರ್ಯವಿದ್ದರೆ ಕರ್ನಾಟಕಕ್ಕೆ ಬಂದು ಮಾತನಾಡಲಿ ಎಂದು ಸಚಿವ ಪ್ರಭು ಚವ್ಹಾಣ ಸವಾಲು ಹಾಕಿದರು.

SCROLL FOR NEXT