ರಾಜ್ಯ

ಚಿಕ್ಕಬಳ್ಳಾಪುರ: ಕುಡಿಯೋಕೆ ಹಣ ನೀಡದ್ದಕ್ಕೆ ಒನಕೆಯಿಂದ ಪತ್ನಿಯನ್ನೇ ಕೊಂದ ಪಾಪಿ!

Raghavendra Adiga

ಚಿಕ್ಕಬಳ್ಳಾಪುರ: ಕುಡಿಯಲು ಹಣ ಕೇಳಿದರೆ ಕೊಡಲಿಲ್ಲ ಎಂಬ ಕಾರಣಕ್ಕೆ ಗಂಡನೊಬ್ಬ ಒನಕೆಯಿಂದ ಪತ್ನಿಗೆ ಮನ ಬಂದಂತೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ನಡೆದಿದೆ.

ಬಾಗೇಪಲ್ಲಿಯ ಭದ್ರೇಪಲ್ಲಿ ಗ್ರಾಮದ ನಿವಾಸಿ ರತ್ನಮ್ಮ (36) ಗಂಡನಿಂದ ಸಾವಿಗೀಡಾದ ದುರ್ದೈವಿ.

ರತ್ನಮ್ಮನ ಪತಿ ಆದಿನಾರಾಯಣ ಈ ಕೃತ್ಯ ಎಸಗಿದ್ದಾನೆ. ಮದ್ಯ ಸೇವನೆಗೆ ರತ್ನಮ್ಮ ಹಣ ನೀಡಿಲ್ಲ ಎನ್ನುವ ಕೋಪಕ್ಕೆ ಒನಕೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

ಪತ್ನಿ ರತ್ನಮ್ಮ ಹಾಗೂ ಆರೋಪಿ ಆದಿನಾರಾಯಣ

ಘಟನೆ ನಂತರ ಆರೋಪಿ ಪತಿ ಆದಿನಾರಾಯಣ ಪರಾರಿಯಾಗಿದ್ದು ಬಾಗೇಪಲ್ಲಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
 

SCROLL FOR NEXT