ಸಾಂದರ್ಭಿಕ ಚಿತ್ರ 
ರಾಜ್ಯ

ವಿಶ್ವ ಮಾನಸಿಕ ಆರೋಗ್ಯ ದಿನ: ಮೈಸೂರಿನ ಟ್ರಸ್ಟ್ ನಿಂದ ಮನೋವೈದ್ಯ ಶಿಕ್ಷಕರಿಗೆ ಸ್ಕಾಲರ್ ಶಿಫ್ ಪ್ರಕಟ

 ಮೈಸೂರಿನ ಮೈಂಡ್ಸ್ ಯುನೈಟೆಡ್ ಫಾರ್ ಹೆಲ್ತ್ ಸೈನ್ಸಸ್ ಮತ್ತು ಹ್ಯುಮಾನಿಟಿ ಟ್ರಸ್ಟ್ ಈ ವರ್ಷದಿಂದ ಮನೋವೈದ್ಯ ಶಿಕ್ಷಕರಿಗೆ ನಿರ್ದಿಷ್ಟವಾದ ಕಲಿಕೆಯ ಉದ್ದೇಶಗಳು, ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನಗಳಿಗೆ ಬದ್ಧವಾಗಿ ವಿಶೇಷ ಸ್ಕಾಲರ್ ಶಿಫ್ ನ್ನು ಪ್ರಾರಂಭಿಸಿದೆ.

ಮೈಸೂರು: ಮೈಸೂರಿನ ಮೈಂಡ್ಸ್ ಯುನೈಟೆಡ್ ಫಾರ್ ಹೆಲ್ತ್ ಸೈನ್ಸಸ್ ಮತ್ತು ಹ್ಯುಮಾನಿಟಿ ಟ್ರಸ್ಟ್ ಈ ವರ್ಷದಿಂದ ಮನೋವೈದ್ಯ ಶಿಕ್ಷಕರಿಗೆ ನಿರ್ದಿಷ್ಟವಾದ ಕಲಿಕೆಯ ಉದ್ದೇಶಗಳು, ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನಗಳಿಗೆ ಬದ್ಧವಾಗಿ ವಿಶೇಷ ಸ್ಕಾಲರ್ ಶಿಫ್ ನ್ನು ಪ್ರಾರಂಭಿಸಿದೆ.

ಶಿಕ್ಷಕರಲ್ಲಿ ಮನೋವೈದ್ಯಕೀಯ ಬೋಧನಾ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಫೌಂಡೇಶನ್‌ ನೀಡುತ್ತಿರುವ ಧನ ಸಹಾಯದಿಂದ ವಿಶೇಷ ಸ್ಕಾಲರ್ ಶಿಫ್ ನೀಡಲಾಗುತ್ತಿದೆ. 

ಮನೋವೈದ್ಯಕೀಯ ಶಿಕ್ಷಣ ತಜ್ಞರಿಂದ 20 ವಾರಗಳ ಕಾಲ ಬೋಧನಾ ಕೌಶಲ್ಯಗಳನ್ನು  ಟ್ರಸ್ಟ್ ಕಲಿಸಲಿದ್ದು, ತರಬೇತಿ ನೀಡುವ ಶಿಕ್ಷಕರಿಗೆ 10 ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. 

ಸ್ನಾತಕೋತ್ತರ ಮನೋವೈದ್ಯಶಾಸ್ತ್ರದಲ್ಲಿ ಅಂಡರ್ ಗ್ರಾಜುಯೇಟ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ತರಬೇತಿಗಾಗಿ 2018 ರಲ್ಲಿ ಪ್ರಾರಂಭಿಸಲಾದ ಭಾರತದ ಮನೋವೈದ್ಯಕೀಯ ಶಿಕ್ಷಕರಿಗೆ (ಐಟಿಒಪಿ ಪ್ರಶಸ್ತಿ) ನೀಡಲಾಗುವುದು ಎರಡು ವಾರ್ಷಿಕ ಪ್ರಶಸ್ತಿಗಳಲ್ಲಿ ಇದನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಭಾರತದಲ್ಲಿ, ಸಮಾಜದ ಮಾನಸಿಕ ಆರೋಗ್ಯ ಅಗತ್ಯಗಳಿಗಾಗಿ ಅಗತ್ಯ ಮತ್ತು ಲಭ್ಯವಿರುವ ಸಂಪನ್ಮೂಲಗಳ ನಡುವೆ 70-80% ಅಂತರವಿದೆ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿವಿಯಿಂದ ಬಂದಿರುವ ಪ್ರೊಫೆಸರ್ ಮೊಹನ್ ಐಸಾಕ್ ಹೇಳಿದ್ದಾರೆ.

ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಪಠ್ಯಕ್ರಮದಲ್ಲೂ ಭಾರತದಲ್ಲಿ ಮುಂಬರುವ ಎಂಬಿಬಿಎಸ್ ವೈದ್ಯರಲ್ಲಿ ಮನೋವೈದ್ಯಶಾಸ್ತ್ರ ಕೌಶಲ್ಯಗಳ ಕಡ್ಡಾಯ ಮೌಲ್ಯಮಾಪನವಿಲ್ಲ ಎಂದು ಟ್ರಸ್ಟಿ ಡಾ. ಕಿರಣ್ ಕುಮಾರ್ ಹೇಳುತ್ತಾರೆ.

 ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಎಂ.ಕಿಶೋರ್, ಭಾರತವು ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ, 500, ಮತ್ತು 4,50,000 ಕ್ಕೂ ಹೆಚ್ಚು ವೈದ್ಯರಿಗೆ ಯಾವುದೇ ಸಮಯದಲ್ಲಿ ತರಬೇತಿ ನೀಡಲಾಗುತ್ತಿದೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ತಿಳಿಸಿದರು.

ಅಂಡರ್ ಗ್ರಾಜುಯೇಟ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸಹ ಅಧಿವೇಶನಗಳ ಭಾಗವಾಗಲಿದ್ದು, ಮನೋವೈದ್ಯಕೀಯ ಶಿಕ್ಷಕರಿಗೆ ವರ್ಷಕ್ಕೆ 10,000 ರೂ.ಸ್ಕಾಲರ್ ಶಿಫ್ ನೀಡಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ವಿವರಗಳಿಗಾಗಿ, mindsmysore@gmail.com ಗೆ ಮೇಲ್ ಕಳುಹಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel