ಸಾಂದರ್ಭಿಕ ಚಿತ್ರ 
ರಾಜ್ಯ

ವಿಶ್ವ ಮಾನಸಿಕ ಆರೋಗ್ಯ ದಿನ: ಮೈಸೂರಿನ ಟ್ರಸ್ಟ್ ನಿಂದ ಮನೋವೈದ್ಯ ಶಿಕ್ಷಕರಿಗೆ ಸ್ಕಾಲರ್ ಶಿಫ್ ಪ್ರಕಟ

 ಮೈಸೂರಿನ ಮೈಂಡ್ಸ್ ಯುನೈಟೆಡ್ ಫಾರ್ ಹೆಲ್ತ್ ಸೈನ್ಸಸ್ ಮತ್ತು ಹ್ಯುಮಾನಿಟಿ ಟ್ರಸ್ಟ್ ಈ ವರ್ಷದಿಂದ ಮನೋವೈದ್ಯ ಶಿಕ್ಷಕರಿಗೆ ನಿರ್ದಿಷ್ಟವಾದ ಕಲಿಕೆಯ ಉದ್ದೇಶಗಳು, ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನಗಳಿಗೆ ಬದ್ಧವಾಗಿ ವಿಶೇಷ ಸ್ಕಾಲರ್ ಶಿಫ್ ನ್ನು ಪ್ರಾರಂಭಿಸಿದೆ.

ಮೈಸೂರು: ಮೈಸೂರಿನ ಮೈಂಡ್ಸ್ ಯುನೈಟೆಡ್ ಫಾರ್ ಹೆಲ್ತ್ ಸೈನ್ಸಸ್ ಮತ್ತು ಹ್ಯುಮಾನಿಟಿ ಟ್ರಸ್ಟ್ ಈ ವರ್ಷದಿಂದ ಮನೋವೈದ್ಯ ಶಿಕ್ಷಕರಿಗೆ ನಿರ್ದಿಷ್ಟವಾದ ಕಲಿಕೆಯ ಉದ್ದೇಶಗಳು, ಕಲಿಕೆಯ ವಿಧಾನಗಳು ಮತ್ತು ಮೌಲ್ಯಮಾಪನಗಳಿಗೆ ಬದ್ಧವಾಗಿ ವಿಶೇಷ ಸ್ಕಾಲರ್ ಶಿಫ್ ನ್ನು ಪ್ರಾರಂಭಿಸಿದೆ.

ಶಿಕ್ಷಕರಲ್ಲಿ ಮನೋವೈದ್ಯಕೀಯ ಬೋಧನಾ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇನ್ಫೋಸಿಸ್ ಫೌಂಡೇಶನ್‌ ನೀಡುತ್ತಿರುವ ಧನ ಸಹಾಯದಿಂದ ವಿಶೇಷ ಸ್ಕಾಲರ್ ಶಿಫ್ ನೀಡಲಾಗುತ್ತಿದೆ. 

ಮನೋವೈದ್ಯಕೀಯ ಶಿಕ್ಷಣ ತಜ್ಞರಿಂದ 20 ವಾರಗಳ ಕಾಲ ಬೋಧನಾ ಕೌಶಲ್ಯಗಳನ್ನು  ಟ್ರಸ್ಟ್ ಕಲಿಸಲಿದ್ದು, ತರಬೇತಿ ನೀಡುವ ಶಿಕ್ಷಕರಿಗೆ 10 ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. 

ಸ್ನಾತಕೋತ್ತರ ಮನೋವೈದ್ಯಶಾಸ್ತ್ರದಲ್ಲಿ ಅಂಡರ್ ಗ್ರಾಜುಯೇಟ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ತರಬೇತಿಗಾಗಿ 2018 ರಲ್ಲಿ ಪ್ರಾರಂಭಿಸಲಾದ ಭಾರತದ ಮನೋವೈದ್ಯಕೀಯ ಶಿಕ್ಷಕರಿಗೆ (ಐಟಿಒಪಿ ಪ್ರಶಸ್ತಿ) ನೀಡಲಾಗುವುದು ಎರಡು ವಾರ್ಷಿಕ ಪ್ರಶಸ್ತಿಗಳಲ್ಲಿ ಇದನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ.

ಭಾರತದಲ್ಲಿ, ಸಮಾಜದ ಮಾನಸಿಕ ಆರೋಗ್ಯ ಅಗತ್ಯಗಳಿಗಾಗಿ ಅಗತ್ಯ ಮತ್ತು ಲಭ್ಯವಿರುವ ಸಂಪನ್ಮೂಲಗಳ ನಡುವೆ 70-80% ಅಂತರವಿದೆ ಎಂದು ವೆಸ್ಟರ್ನ್ ಆಸ್ಟ್ರೇಲಿಯಾ ವಿವಿಯಿಂದ ಬಂದಿರುವ ಪ್ರೊಫೆಸರ್ ಮೊಹನ್ ಐಸಾಕ್ ಹೇಳಿದ್ದಾರೆ.

ಹೊಸ ಸಾಮರ್ಥ್ಯ ಆಧಾರಿತ ವೈದ್ಯಕೀಯ ಪಠ್ಯಕ್ರಮದಲ್ಲೂ ಭಾರತದಲ್ಲಿ ಮುಂಬರುವ ಎಂಬಿಬಿಎಸ್ ವೈದ್ಯರಲ್ಲಿ ಮನೋವೈದ್ಯಶಾಸ್ತ್ರ ಕೌಶಲ್ಯಗಳ ಕಡ್ಡಾಯ ಮೌಲ್ಯಮಾಪನವಿಲ್ಲ ಎಂದು ಟ್ರಸ್ಟಿ ಡಾ. ಕಿರಣ್ ಕುಮಾರ್ ಹೇಳುತ್ತಾರೆ.

 ಜೆಎಸ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ.ಎಂ.ಕಿಶೋರ್, ಭಾರತವು ಹೆಚ್ಚಿನ ಸಂಖ್ಯೆಯ ವೈದ್ಯಕೀಯ ಕಾಲೇಜುಗಳಲ್ಲಿ ಒಂದಾಗಿದೆ, 500, ಮತ್ತು 4,50,000 ಕ್ಕೂ ಹೆಚ್ಚು ವೈದ್ಯರಿಗೆ ಯಾವುದೇ ಸಮಯದಲ್ಲಿ ತರಬೇತಿ ನೀಡಲಾಗುತ್ತಿದೆ, ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ತಿಳಿಸಿದರು.

ಅಂಡರ್ ಗ್ರಾಜುಯೇಟ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಸಹ ಅಧಿವೇಶನಗಳ ಭಾಗವಾಗಲಿದ್ದು, ಮನೋವೈದ್ಯಕೀಯ ಶಿಕ್ಷಕರಿಗೆ ವರ್ಷಕ್ಕೆ 10,000 ರೂ.ಸ್ಕಾಲರ್ ಶಿಫ್ ನೀಡಲಾಗುತ್ತಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ವಿವರಗಳಿಗಾಗಿ, mindsmysore@gmail.com ಗೆ ಮೇಲ್ ಕಳುಹಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಬರವಣಿಗೆಯಲ್ಲಿ ಖುಷಿ ಕಂಡ ಪೊಲೀಸ್ ಅಧಿಕಾರಿ: 'ಬಸವಣ್ಣನ ವಚನ' ಗಳನ್ನು ಇಂಗ್ಲೀಷ್ ಗೆ ಅನುವಾದ ಮಾಡ್ತಿರೋ DYSP ಬಸವರಾಜ್ ಯಲಿಗಾರ್!

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

SCROLL FOR NEXT