ಬಂಧಿತ ಬೇಟೆಗಾರರು 
ರಾಜ್ಯ

ಹಿರಿಯೂರು ಬಳಿ ಅರಣ್ಯಾಧಿಕಾರಿಗಳ ಭರ್ಜರಿ ಬೇಟೆ: 7 ಮಂದಿ ಕಳ್ಳ ಬೇಟೆಗಾರರ ಬಂಧನ

ಹಿರಿಯೂರು ತಾಲೂಕಿನ ಗೌಡನಹಳ್ಳಿ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ಬೇಟೆಯಾಡಲು ಸಜ್ಜಾಗಿದ್ದ ಹೈಪ್ರೊಫೈಲ್ ವೃತ್ತಿಪರ ಏಳು ಮಂದಿ ವನ್ಯಜೀವಿ ಬೇಟೆಗಾರರನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ಭಾನುವಾರ ಬಂಧಿಸಿದ್ದು, ಅವರಿಂದ ವಿದೇಶಿ ಗನ್'ಗಳು, ಅಪಾರ ಪ್ರಮಾಣದ ಕಾಟ್ರಿಜ್'ಗಳು ಮತ್ತು ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಚಿತ್ರದುರ್ಗ: ಹಿರಿಯೂರು ತಾಲೂಕಿನ ಗೌಡನಹಳ್ಳಿ ಅರಣ್ಯ ಪ್ರದೇಶದ ಸರಹದ್ದಿನಲ್ಲಿ ಬೇಟೆಯಾಡಲು ಸಜ್ಜಾಗಿದ್ದ ಹೈಪ್ರೊಫೈಲ್ ವೃತ್ತಿಪರ ಏಳು ಮಂದಿ ವನ್ಯಜೀವಿ ಬೇಟೆಗಾರರನ್ನು ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ಭಾನುವಾರ ಬಂಧಿಸಿದ್ದು, ಅವರಿಂದ ವಿದೇಶಿ ಗನ್'ಗಳು, ಅಪಾರ ಪ್ರಮಾಣದ ಕಾಟ್ರಿಜ್'ಗಳು ಮತ್ತು ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಅಂತರಾಷ್ಟ್ರೀಯ ಖ್ಯಾತಿ ಪ್ರಗತಿಪರ ರೈತ ಶಿವಮೊಗ್ಗ ಮೂಲದ ಪ್ರಫುಲ್ಲ ಚಂದ್ರ ಅವರ ಮಗ ಇಕ್ಷು ಧನ್ವಾ, ಬೆಂಗಳೂರಿನ ಧುವನ್, ಪ್ರತಾಪ್ ಹಾಗೂ ರತ್ನಸ್ವಾಮಿ, ಸಹದೇವ್, ವಿನೋದ್ ಮತ್ತು ಅಪ್ರಾಪ್ತ ಬಾಲಕನೊಬ್ಬ ಬಂಧನಕ್ಕೊಳಗಾಗಿದ್ದಾರೆ. 

ಆರೋಪಿಗಳಿಂದ ಸ್ಕಾರ್ಪಿಯೋ, ಮಹೀಂದ್ರಾ ಜೀಪ್ ಸೇರಿದಂತೆ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ವೃತ್ತಿಪರ ಬೇಟೆಗಾರರು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಾದು ಬಂಧನಕ್ಕೊಳಪಡಿಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಬೇಟೆಗಾರರಿಂದ ಸಿಕ್ಕ ಗನ್ ಗಳು ಎರಡೂ ಇಲಾಖೆಯ ಸಿಬ್ಬಂದಿಗಳನ್ನೇ ಬೆಚ್ಚಿಬೀಳಿಸುವಷ್ಟು ಅತ್ಯಾಧುನಿಕವಾಗಿವೆ. ಟೆಲಿಸ್ಕೋಪಿಕ್ ಸೈಫರ್ ಗನ್'ಗಳು, ಏರ್ ಗನ್, ಪಾಯಿಂಟ್ 22 ಪಿಸ್ತೂಲ್ ಗಳು, ಪಿಸ್ತೂಲ್ ಮತ್ತು ಗನ್ ಗಳ 50ಕ್ಕೂ ಹೆಚ್ಚು ಕಾಟ್ರಿಜ್ ಗಳು, ಬುಲೆಟ್'ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವು ಅಮೆರಿಕಾ ಮತ್ತು ಸ್ವೀಡನ್ ದೇಶದಲ್ಲಿ ತಯಾರಾದವು ಎಂದು ಅಧಿಕಾರಿಗಳು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ