ರಾಜ್ಯ

ಮೈಸೂರು: ಚಾಮುಂಡಿ ರಥೋತ್ಸವದ ಭಕ್ತಾದಿಗಳ ಸಂಖ್ಯೆ 200ಕ್ಕೆ ಸೀಮಿತಗೊಳಿಸಿದ ಜಿಲ್ಲಾಡಳಿತ

Vishwanath S

ಮೈಸೂರು: ಚಾಮುಂಡಿ ಬೆಟ್ಟದ ಮೇಲಿನ ಚಾಮುಂಡೇಶ್ವರಿ ದೇಗುಲದಲ್ಲಿ ನಡೆಯುವ ವಾರ್ಷಿಕ ಚಾಮುಂಡಿ ರಥೋತ್ಸವದಲ್ಲಿ ಭಾಗವಹಿಸುವವರ ಸಂಖ್ಯೆ 200ಕ್ಕೆ ಸೀಮಿತಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. 

ಗುರುವಾರ ಬೆಳಗ್ಗೆ 9.45ರಿಂದ 10.05ರವರೆಗೆ ರಥೋತ್ಸವ ಹಮ್ಮಿಕೊಳ್ಳಲಾಗುವುದು. ಆದ್ದರಿಂದ ಕೋವಿಡ್‌ ಹರಡುವಿಕೆ ತಡೆಯುವ ಮುಂಜಾಗ್ರತಾ ಕ್ರಮಗಳಾಗಿ, ಜನರ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ. 

ರಥೋತ್ಸವದ ಎಲ್ಲಾ ಸಂಪ್ರದಾಯಗಳು ಹಿಂದಿನಂತೆಯೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT