ರಾಜ್ಯ

ಮೈಸೂರು ದಸರಾ: 'ಅರ್ಜುನ'ನ ಬದಲು 'ಅಭಿಮನ್ಯು' ಹೆಗಲಿಗೆ ಚಿನ್ನದ ಅಂಬಾರಿ

Raghavendra Adiga

ಮೈಸೂರು: ಈ ಬಾರಿಯ ಮೈಸೂರು ದಸರಾದಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು "ಅರ್ಜುನ"ನ ಬದಲು "ಅಭಿಮನ್ಯು" ಹೊರಲಿದ್ದಾನೆ.  ಇಷ್ಟು ದಿನ ಅಂಬಾರಿ ಹೊರುತ್ತುದ್ದ ಆನೆ ಅರ್ಜುನನಿಗೆ 60 ವರ್ಷ ತುಂಬಿದ್ದರಿಂದ ಅವನ ಬದಲು ಅಭಿಮನ್ಯು ಈ ವರ್ಷದ ವಿಜಯಶಾಮಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿಹೊರಲಿದ್ದಾನೆ.

ಸುಪ್ರೀಂ ಕೋರ್ಟ್ ನಿರ್ದೇಶನಗಳು ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, 60 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ಆನೆಗೆ ಭಾರವಾದ ಮತ್ತು ಒತ್ತಡದ ಕರ್ತವ್ಯವನ್ನು ವಹಿಸುವಂತಿಲ್ಲ. 

ಇಲ್ಲಿಯವರೆಗೆ, ಅರ್ಜುನನು ಸತತ ಎಂಟು ಬಾರಿ ಚಿನ್ನದ ಅಂಬಾರಿಯನ್ನು ಕೊಂಡೊಯ್ದಿದ್ದನು, ಇನ್ನು ಈ ಬಾರಿ ಅಂಬಾರಿ ಹೊರುತ್ತಿರುವ ಆನೆ ಅಭಿಮನ್ಯು ದಸರಾದಲ್ಲಿ ಇಲ್ಲಿಯವರೆಗೆ ನೌಫತ್ ಆನೆಯಾಗಿ ಭಾಗವಹಿಸುತ್ತಿದ್ದನು.

SCROLL FOR NEXT