ತ್ಯಾಜ್ಯ ನೀರು ಸಂಸ್ಕರಣಾ ಘಟಕ 
ರಾಜ್ಯ

ಹೆಬ್ಬಾಳ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆ

ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ  ಪ್ರತಿ ದಿನ 100 ಮಿಲಿಯನ್ ಸಂಸ್ಕರಿತ ನೀರನ್ನು ಪೂರೈಕೆ ಮಾಡುವ ಗುರಿ ಹೊಂದಿರುವ  250 ಕೋಟಿ ರೂ ವೆಚ್ಚದ ಹೆಬ್ಬಾಳ ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆಯಿದೆ.

ಬೆಂಗಳೂರು: ಬೆಂಗಳೂರು ನಗರ, ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ  ಪ್ರತಿ ದಿನ 100 ಮಿಲಿಯನ್ 
ಸಂಸ್ಕರಿತ ನೀರನ್ನು ಪೂರೈಕೆ ಮಾಡುವ ಗುರಿ ಹೊಂದಿರುವ 250 ಕೋಟಿ ರೂ ವೆಚ್ಚದ ಹೆಬ್ಬಾಳ ಸಂಸ್ಕರಣಾ ಘಟಕ ಡಿಸೆಂಬರ್ ವೇಳೆಗೆ ಕಾರ್ಯಾರಂಭಿಸುವ ಸಾಧ್ಯತೆಯಿದೆ.

ಇದು ಪೂರ್ಣಗೊಂಡರೆ, ಅಂತರ್ಜಲ ಮರು ಪೂರಣಕ್ಕೆ ನೆರವಾಗಲಿದ್ದು, ಡಿಸೆಂಬರ್ ವೇಳೆಗೆ ಕಾರ್ಯಾಚರಣೆ ಆರಂಭಿಸುವ ಸಾಧ್ಯತೆಯಿರುವುದಾಗಿ ಬಿಡಬ್ಲ್ಯೂಎಸ್ ಎಸ್ ಬಿ ಮುಖ್ಯಸ್ಥ ಎಸ್. ಜಯರಾಮ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತಿಳಿಸಿದ್ದಾರೆ.

ಕಂಟ್ರಾಕ್ಟರ್ ಎನ್ವಿರಾನ್ ಟೆಕ್ ನಿಂದ ಶೇ. 78 ರಷ್ಟು ಮುಗಿದ್ದು, ಹೆಬ್ಬಾಳ ಪ್ರದೇಶದಿಂದ ಬರುವ ತ್ಯಾಜ್ಯ ನೀರನ್ನು ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಶುದ್ದೀಕರಿಸಲಾಗುತ್ತದೆ.ನಂತರ ಚಿಕ್ಕಬಳ್ಳಾಪುರಕ್ಕೆ ಹರಿಸಲಾಗುವುದು ಎಂದು ತ್ಯಾಜ ನೀರು ನಿರ್ವಹಣಾ ಮುಖ್ಯ ಎಂಜಿನಿಯರ್ ವಿ. ಗಂಗಾಧರ್ ತಿಳಿಸಿದ್ದಾರೆ.

 ಅಂತರ್ಜಲ ಮರಪೂರಣದಿಂದ ಮೂರು ಜಿಲ್ಲೆಗಳಲ್ಲಿ ಬೋರ್ ವೇಲ್ ಗಳಿಗೆ ನೀರು ಬರಲಿದೆ ಎಂದು ಸಣ್ಣ ನೀರಾವರಿ ಇಲಾಖೆಯ
 ಹೆಬ್ಬಾಳ- ನಾಗವಾರ ಯೋಜನೆಯ ಉಸ್ತುವಾರಿ ಮತ್ತು ಸಹಾಯಕ ಕಾರ್ಯಕಾರಿ ಎಂಜಿನಿಯರ್ ರವೀಂದ್ರನಾಥನ್ ಹೇಳಿದ್ದಾರೆ.

ಹೆಬ್ಬಾಳದಲ್ಲಿನ 50 ಎಂಎಲ್ ಡಿ ಸಾಮರ್ಥ್ಯದ ಹಳೆಯ ತ್ಯಾಜ ನೀರು ನಿರ್ವಹಣಾ ಘಟಕವನ್ನು ನವೀಕರಿಸಲಾಗುತ್ತಿದೆ. 
ನವೀಕರಣಕ್ಕಾಗಿ ಅದನ್ನು ಸಂಪೂರ್ಣವಾಗಿ ನಿಲ್ಲಿಸಲಾಗುವುದು ಎಂದು ಅವರು ತಿಳಿಸಿದರು.

ಶುದ್ದೀಕರಿಸಿದ ನೀರಿನ ಹರಿವಿಗೆ ಅನುಕೂಲವಾಗುವಂತೆ ನೀರಾವರಿ ಇಲಾಖೆ ಐದು ಪಂಪ್‌ಹೌಸ್‌ಗಳನ್ನು ಸ್ಥಾಪಿಸಿದೆ.ಎರಡನೇ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಹೆಬ್ಬಾಳದಿಂದ ಹೆಣ್ಣೂರುವರೆಗೂ ಹರಿಸಲಾಗುವುದು, ತದ ನಂತರ ಬಾಗಲೂರುವರೆಗೂ ನಂತರ ಚಿಕ್ಕಬಳ್ಳಾಪುರದವರೆಗೂ ನೀರನ್ನು  ಹರಿಸಲಾಗುವುದು ಎಂದು ರವೀಂದ್ರನಾಥ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT