ಸಾಂದರ್ಭಿಕ ಚಿತ್ರ 
ರಾಜ್ಯ

ಗಾಂಜಾ ಬೆಳೆಯುವವರಿಗೆ ಪಶ್ಚಿಮ ಘಟ್ಟದ ತಪ್ಪಲು ಸುರಕ್ಷಿತ ಸ್ವರ್ಗ: ಅಕ್ರಮ ಪತ್ತೆಗೆ ಸಜ್ಜಾಗಿದೆ ಅರಣ್ಯ ಇಲಾಖೆ

ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ. ನಿನ್ನೆ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಹುಲಿ ಅಭಯಾರಣ್ಯ ಸುತ್ತಮುತ್ತ ಗಾಂಜಾ ಬೆಳೆಯುವ ಬಗ್ಗೆ ಅರಣ್ಯ ಇಲಾಖೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚುರುಕಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ, ಅಕ್ರಮ ಬೇಟೆ ನಿಗ್ರಹ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳು ಅಕ್ರಮವಾಗಿ ಗಾಂಜಾ ಬೆಳೆಯುವವರನ್ನು ಪತ್ತೆಹಚ್ಚಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತೀವ್ರ ತಪಾಸಣೆ ಅತ್ಯಗತ್ಯವಾಗಿದೆ. ಗಾಂಜಾ ಬೆಳೆಯುವವರಿಗೆ ಅರಣ್ಯ ಪ್ರದೇಶ ಅತ್ಯಂತ ಸುರಕ್ಷಿತ ಸ್ವರ್ಗವೆನಿಸುತ್ತಿದೆ. ಅಲ್ಲಿ ತಪಾಸಣೆ ಮಾಡಬೇಕಾಗಿದೆ ಎಂದರು. 

ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಜನರು ಗಾಂಜಾ ಬೆಳೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ದಟ್ಟ ಅರಣ್ಯದೊಳಗೆ ಇದನ್ನು ಬೆಳೆಯಲಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಮತ್ತು ಖಾಸಗಿ ಬಳಕೆಗೆ ಗಾಂಜಾ ಬೆಳೆಗೆ ಜನರು ಒಲವು ತೋರಿಸುತ್ತಿದ್ದು ಅರಣ್ಯ ಪ್ರದೇಶಗಳ ಬುಡಕಟ್ಟು ಜನಾಂಗ ಮತ್ತು ಸ್ಥಳೀಯರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾವನ್ನು ಕಳೆಗಳಂತೆ ಬೆಳೆಯುವುದರಿಂದ ಇಲಾಖೆಯೂ ಆತಂಕಕ್ಕೊಳಗಾಗುತ್ತದೆ, ಒಂದು ಬೆಳೆ ತೆಗೆದರೆ ಉಳಿದವು ತಾನಾಗಿಯೇ ಬೆಳೆಯುತ್ತದೆ. ಅಕ್ರಮವಾಗಿ ಬೆಳೆಸುವ ಬಗ್ಗೆ ಸೂಕ್ತ ತನಿಖೆ ಮಾಡಬೇಕಿದೆ. ಕೆಲವು ಬುಡಕಟ್ಟು ಜನಾಂಗದವರು ತಮ್ಮ ಬಳಕೆಗಾಗಿ ಗಾಂಜಾವನ್ನು ಬೆಳೆಯುತ್ತಾರೆ ಎಂಬ ಮಾಹಿತಿಯೂ ಇದೆ, ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ದಂಧೆಯನ್ನು ತಳಮಟ್ಟದಲ್ಲಿಯೇ ಬೇಧಿಸಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪೊಲೀಸರು ಬುಡಕಟ್ಟು ಜನಾಂಗದವರನ್ನು ಬಂಧಿಸಿ 26 ಕೆಜಿ ಗಾಂಜಾ ವಶ: ಚಾಮರಾಜನಗರ ತಾಲ್ಲೂಕಿನಲ್ಲಿ ತನ್ನ ಹೊಲಗಳಲ್ಲಿ 26.8 ಕೆಜಿ ಗಾಂಜಾ ಬೆಳೆದಿದ್ದ ಬೆಲವಥ ಗ್ರಾಮದ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರು 134 ಗಾಂಜಾ ಸಸಿಗಳನ್ನು ಬೆಳೆಸಿದ್ದರು, ಚಾಮರಾಜನಗರ ಪಶ್ಚಿಮ ಪೊಲೀಸರು ಸುಳಿವು ನೀಡಿ ಹೊಲಗಳ ಮೇಲೆ ದಾಳಿ ನಡೆಸಿ ಪೊಲೀಸರು ಜಡೆ ಗೌಡನನ್ನು ಬಂಧಿಸಿದ್ದಾರೆ. ಅಪರಾಧದಲ್ಲಿ ಜಡೇಗೌಡನಿಗೆ ಸಹಾಯ ಮಾಡಿದ ಮದಯ್ಯನನ್ನು ಹುಡುಕುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಡೆವಿಲ್‌' ಸಿನಿಮಾದ 'ಇದ್ರೆ ನೆಮ್ಮದಿಯಾಗಿ ಇರಬೇಕು' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT