ರಾಜ್ಯ

ಹಿರಿಯ ಪತ್ರಿಕಾ ಛಾಯಾಗ್ರಾಹಕ ಅಮರ್ ದಾಸ್ ಇನ್ನಿಲ್ಲ

Raghavendra Adiga

ಮೈಸೂರು: ಹಿರಿಯ ಪತ್ರಿಕಾ ಛಾಯಾಗ್ರಾಹಕ ಅಮರ್ ದಾಸ್ (83) ಭಾನುವಾರ ನಗರದ ತಮ್ಮ ನಿವಾಸದಲ್ಲಿ ನಿಧನರಾದರು. 

ಅವರು ಸ್ವತಂತ್ರ ಪತ್ರಿಕಾ ಛಾಯಾಗ್ರಾಹಕರಾಗಿದ್ದರು. ಡೆಕ್ಕನ್ ಹೆರಾಲ್ಡ್, ದಿ ಹಿಂದೂ, ಇತರ ಕೆಲವು ರಾಜ್ಯ ಮಟ್ಟದ ಸುದ್ದಿ ಪತ್ರಿಕೆಗಳು ಮತ್ತು ಸ್ಥಳೀಯ ಪತ್ರಿಕೆಗಳಿಗೆ ದೀರ್ಘಕಾಲದವರೆಗೆ ಫೋಟೋಗಳನ್ನು ನೀಡುತ್ತಿದ್ದರು.

ದಿವಂಗತ ಮಾಜಿ  ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಇತರರು ಸೇರಿದಂತೆ ನಗರಕ್ಕೆ ಭೇಟಿ ನೀಡಿದ ಎಲ್ಲಾ ವಿವಿಐಪಿಗಳ ಛಾಯಾಗ್ರಹಣ ಸಂಗ್ರಹವನ್ನು ಅವರು ಹೊಂದಿದ್ದರು ಅವರು ಮೈಸೂರು ರಾಜಮನೆತನಕ್ಕೆ ಬಹಳ ಪರಿಚಿತರಾಗಿದ್ದರು ಮತ್ತು ಜಯಚಾಮರಾಜ ಒಡೆಯರ್ ಕಾಲದಿಂದ ಇಂದಿನವರೆಗೆ ಎಲ್ಲಾ ರಾಜ ಮಹಾರಾಜರ ಛಾಯಾಗ್ರಾಹಕರಾಗಿದ್ದರು.  ಸುಮಾರು ಐದು ದಶಕಗಳಿಂದ ವಿಶ್ವಪ್ರಸಿದ್ಧ ದಸರಾ ಉತ್ಸವಗಳಲ್ಲಿ ಭಾಗವಹಿಸಿದ್ದರು.

ಅವರ ಚಾಯಾಗ್ರಾಹಕರನ್ನು ವಿವಿಧ ವಿದೇಶಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.

ಮೃತರಿಗೆ  ಪತ್ನಿ, ಒಬ್ಬ ಮಗ ಮತ್ತು ಇಬ್ಬರು ಪುತ್ರಿಯರಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ನಗರದ ವಿಜಯನಗರದಲ್ಲಿರುವ ಚಿತಾಗಾರದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

SCROLL FOR NEXT