ರಾಜ್ಯ

ಕುಡಿದ ಅಮಲಿನಲ್ಲಿ ನೇಣಿಗೆ ಶರಣಾದ ಯುವಕ 

Nagaraja AB

ಚಾಮರಾಜನಗರ: ಅತಿಯಾಗಿ ಮದ್ಯದ ಚಟಕ್ಕೆ ದಾಸನಾಗಿದ್ದ ಯುವಕನೊಬ್ಬ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ಕೊಳ್ಳೇಗಾಲ ಪಟ್ಟಣದಲ್ಲಿ ನಡೆದಿದೆ.

ಕೊಳ್ಳೇಗಾಲ ಪಟ್ಟಣದ ಚಿಕ್ಕನಾಯಕರ ಬೀದಿ ನಿವಾಸಿ ಸಂತೋಷ (22) ಮೃತ ದುರ್ದೈವಿ. ದಿನಬೆಳಗಾದರೆ ಮಧ್ಯದ ಮೊರೆಹೋಗುತ್ತಿದ್ದ ಈತ ದಿನವಿಡೀ ಕುಡಿಯುತ್ತಿದ್ದ ಎನ್ನಲಾಗಿದೆ.

 ನಿನ್ನೆ ಸಂಜೆ ಮನೆಯಲ್ಲಿ ‌ಯಾರು‌ ಇಲ್ಲದಿರುವ ಸಮಯದಲ್ಲಿ ಕುಡಿದ ಅಮಲಿನಲ್ಲಿ ಸೀರೆ ಬಳಸಿ ನೇಣಿಗೆ ಕೊರೊಳೊಡ್ಡಿ ಮೃತಪಟ್ಟಿದ್ದಾನೆ.

ಈ ಸಂಬಂಧ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ‌ ಮೃತದೇಹವನ್ನು‌ ನೀಡಲಾಯಿತು.

ವರದಿ: ಗುಳಿಪುರ ನಂದೀಶ ಎಂ

SCROLL FOR NEXT