ಬಂಧಿತ ಡ್ರಗ್ ಪೆಡ್ಲರ್ 
ರಾಜ್ಯ

ಬೆಳಗಾವಿ ಪೋಲೀಸರ ಭರ್ಜರಿ ಬೇಟೆ: 24 ಲಕ್ಷ ರೂ. ಮೌಲ್ಯದ ಗಾಂಜಾ ವಶ, ಓರ್ವನ ಬಂಧನ

 ಅಂತರರಾಜ್ಯ ಡ್ರಗ್ ಪೆಡ್ಲರ್ ನೊಬ್ಬನನ್ನು ಶನಿವಾರ ಬಂಧಿಸಿರುವ ಬೆಳಗಾವಿ ಜಿಲ್ಲಾ ಅಪರಾಧ ಗುಪ್ತಚರ ದಳ (ಡಿಸಿಐಬಿ) 24 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳಗಾವಿ: ಅಂತರರಾಜ್ಯ ಡ್ರಗ್ ಪೆಡ್ಲರ್ ನೊಬ್ಬನನ್ನು ಶನಿವಾರ ಬಂಧಿಸಿರುವ ಬೆಳಗಾವಿ ಜಿಲ್ಲಾ ಅಪರಾಧ ಗುಪ್ತಚರ ದಳ (ಡಿಸಿಐಬಿ) 24 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗೆ  ಮಾದಕ ದ್ರವ್ಯ ಸರಬರಾಜು ಮಾಡುತ್ತಿದ್ದ ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್‌ನ ಇನ್ನೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಲು ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.

ಪ್ಟೆಂಬರ್ 22 ರಂದು ಚಿಕ್ಕೋಡಿ ಪೊಲೀಸರು ಮೀರಜ್  ನಿವಾಸಿ  ಡ್ರಗ್ ಪೆಡ್ಲರ್ ಆಶ್ಪಕ್ ಮುಲ್ಲಾ  ಎಂದು ಗುರುತಿಸಲ್ಪಟ್ಟ ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಸ್ಥಳದಲ್ಲೇ ಆತನ ಬಳಿಯಿದ್ದ  2 ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ಶನಿವಾರ  ಹೇಳಿಕೆ ನೀಡಿದ್ದಾರೆ.  ಬಂಧಿತನ ಸಹಚರ ಹಾಗೂ ಮುಖ್ಯ ಆರೋಪಿ ತಲೆತಪ್ಪಿಸಿಕೊಂಡಿದ್ದಾರೆ.

ಡಿಸಿಐಬಿ ವಿಶೇಷ ತಂಡವನ್ನು ಸ್ಥಾಪಿಸಿ ಸೆಪ್ಟೆಂಬರ್ 23 ರಂದು ಮುಲ್ಲಾನನ್ನು  ಮೀರಜ್ ನಿಂದ  ಬಂಧಿಸುವಲ್ಲಿ ಯಶಸ್ವಿಯಾಯಿತು. ವಿಚಾರಣೆ ವೇಳೆ ಮುಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದು, ವಾರಂಗಲ್ ಮತ್ತು ಹೈದರಾಬಾದ್ ಮೂಲದ ಇಬ್ಬರು ತನಗೆ ಗಾಂಜಾ ಸರಬರಾಜು ಮಾಡುತ್ತಿದ್ದರು ಮತ್ತು ಅವರು ಮಹಾರಾಷ್ಟ್ರದ ಮೀರಜ್ ಮತ್ತು ಸಾಂಗ್ಲಿಯಲ್ಲಿಗಾಂಜಾ ಮಾರಾಟ ನಡೆಸಿದ್ದರು. ಅಲ್ಲದೆ ಬೆಳಗಾವಿಯ ಚಿಕ್ಕೋಡಿಮ್ ಧಾರವಾಡಗಳಲ್ಲಿ ಅವರ್ ವ್ಯವಹಾರವಿದೆ ಎಂದು ಬಾಯಿಬಿಟ್ಟಿದ್ದಾನೆ,

ಮೀರಜ್ ನ  ಮಹಿಷಾದಲ್ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನ ಹಿಂದಿನ ಭಾಗದಲ್ಲಿ ಪ್ಯಾಕೆಟ್‌ಗಳಲ್ಲಿ ಸಂಗ್ರಹಿಸಿದ್ದ 40 ಕೆಜಿ ತೂಕದ ಗಾಂಜಾ ಮತ್ತು ಅದೇ ಗ್ರಾಮದ ಕೃಷಿ ಭೂಮಿಯಲ್ಲಿರುವ ತೋಟದ ಮನೆಯಲ್ಲಿ 78 ಕೆಜಿ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT