ರಾಜ್ಯ

ಮನೆ ಮಂದಿಗೆಲ್ಲಾ ಲಸಿಕೆಯ ಸಿಹಿ ಕೊಡಿಸಿ, ಕೊರೋನ ತೊಲಗಿಸಿ: ಆರೋಗ್ಯ ಸಚಿವ ಡಾ. ಕೆ ಸುಧಾಕರ್

Srinivasamurthy VN

ಬೆಂಗಳೂರು: ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನ ಕೊರೊನಾ ಲಸಿಕಾ ಉತ್ಸವವನ್ನು ಆಚರಿಸಲಾಗುತ್ತಿದ್ದು, 45 ವರ್ಷದ ಮೇಲ್ಪಟ್ಟವರು ತಪ್ಪದೇ ಲಸಿಕೆ ಪಡೆಯುವಂತೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನವಿ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಸಚಿವರು ಇಂದಿನಿಂದ ಇದೆ 14 ರವರೆಗೆ ಕೊರೋನಾ ಲಸಿಕಾ ಉತ್ಸವವನ್ನು ಆಚರಿಸುತ್ತಿದ್ದೇವೆ. 45 ವರ್ಷದ ಮೇಲಿನ ಎಲ್ಲರೂ ತಪ್ಪದೆ ಇಂದೇ ಕರೋನ ಲಸಿಕೆ ಹಾಕಿಸಿ. ಬನ್ನಿ, ಕರೋನಾ ಯುಗಕ್ಕೆ ಅಂತ್ಯ ಹಾಡೋಣ ಎಂದು ಟ್ವೀಟ್ ಮಾಡಿದ್ದಾರೆ. ಹೊರ ಹೋಗದಂತೆ  ಮನೆಯೋಳಗೆ ಕೂಡಿ ಹಾಕಿದ ಕೊರೊನಾ ಕಹಿ ನೆನಪನ್ನು ಮರೆಯಿರಿ, ಮನೆ ಮಂದಿಗೆಲ್ಲ ಲಸಿಕೆಯ ಸಿಹಿ ಕೊಡಿಸಿರಿ ಎಂದೂ ಜನತೆಗೆ ಸಚಿವರು ಮನವಿ ಮಾಡಿದ್ದಾರೆ.

SCROLL FOR NEXT