ರಾಜ್ಯ

ಪ್ರಿಯ ಬೆಂಗಳೂರಿಗರೇ, ದಯವಿಟ್ಟು ಮನೆಯ ಹೆಂಗಸರ ಸೂಚನೆಗಳನ್ನು ಪಾಲಿಸಿ: ಭಾಸ್ಕರ್ ರಾವ್ 

Nagaraja AB

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಪ್ರಕರಣ ಸಂಖ್ಯೆಗಳು ಹೆಚ್ಚಾಗುತ್ತಿರುವಂತೆಯೇ ಹಿರಿಯ ಪೊಲೀಸ್ ಅಧಿಕಾರಿ, ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್  ಟ್ವೀಟ್ ವೊಂದನ್ನು ಮಾಡುವ ಮೂಲಕ ಆರೋಗ್ಯದ ಬಗ್ಗೆ ಜನರು ಕಾಳಜಿ ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಮನೆಯ ಮಹಿಳೆಯರು ಹೇಳುವ ಸೂಚನೆಗಳನ್ನು ಪಾಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

ಹೆಚ್ಚಾಗುತ್ತಿರುವ ಪಾಸಿಟಿವ್ ಪ್ರಕರಣಗಳನ್ನು ನೋಡಿ, ಇಂಥ ಸಂದರ್ಭದಲ್ಲಿ ಮನೆಯ ಮಟ್ಟದಲ್ಲಿ ನಾಯಕತ್ವದ ಅಗತ್ಯವಿದೆ. ಅದರಲ್ಲೂ ದಯವಿಟ್ಟು ಮನೆಯ ಮಹಿಳೆಯರು ಹೇಳುವ ಸೂಚನೆಗಳಿಗೆ ಬದ್ಧವಾಗಿ, ಅವರು ಹೇಳುವ ಮಾತುಗಳನ್ನು ಕೇಳಿ ಪಾಲಿಸಿ, ಏಕೆಂದರೆ ಅವರಿಗೆ ಹೆಚ್ಚಿನ ಕಾಳಜಿ ಇರುತ್ತದೆ. ಮಾತ್ರವಲ್ಲ, ಮೂಗು ಮುಚ್ಚುವಂತೆ ಮಾಸ್ಕ್ ಧರಿಸಿ, ದೈಹಿಕ ಅಂತರ ಪಾಲಿಸಿ ಹಾಗೂ ಅನಗತ್ಯವಾಗಿ ಹೊರಗೆ ಎಲ್ಲೆಂದರಲ್ಲಿ ಅಲೆದಾಡಬೇಡಿ ಎಂದು ಅವರು ಕೋರಿದ್ದಾರೆ.

SCROLL FOR NEXT