ರಾಜ್ಯ

ಲಾಕ್ಡೌನ್ ಹೇರಿದರೆ ಇನ್ನಷ್ಟು ಸಂಕಷ್ಟವಾಗಲಿದೆ: ಸಚಿವ ಶ್ರೀರಾಮುಲು

Manjula VN

ಬೆಂಗಳೂರು: ಕೋವಿಡ್‌ನಿಂದಾಗಿ ಸರ್ಕಾರವೂ ಸೇರಿದಂತೆ ಜನರೂ ಸಂಕಷ್ಟದಲ್ಲಿದ್ದಾರೆ.ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ಹೇರಿದರೆ ಮತ್ತಷ್ಟು ಸಮಸ್ಯೆ ಹೆಚ್ಚುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮುಲು, ಲಾಕ್ಡೌನ್ ಹೇರಿದರೆ ವ್ಯಾಪಾರಿಗಳಿಗೆ, ಜನರಿಗೆ ಸಂಕಷ್ಟ ಎದುರಾಗಲಿದೆ.ಹೀಗಾಗಿ ಲಾಕ್‌ಡೌನ್ ಒಂದೇ ಮಾರ್ಗವಲ್ಲ.ಇದನ್ನೇ ಸಿಎಂ ಯಡಿಯೂರಪ್ಪ ಕೂಡ ಇದನ್ನೇ ಹೇಳಿದ್ದಾರೆ.

ರಾಜ್ಯದ ಜನ ಸ್ವಯಂ ನಿಯಂತ್ರಣ ಮಾಡಬೇಕು.ಕೋವಿಡ್ ನಿಯಮ‌ ಪಾಲನೆ ಮಾಡಬೇಕು.ಕರ್ಫ್ಯೂ ಅಥವಾ ಲಾಕ್ಡೌನ್ ಬಗ್ಗೆ ಪ್ರತಿಪಕ್ಷ ಮುಖಂಡರ ಜೊತೆ ಸಭೆ ನಂತರ ತೀರ್ಮಾನ ಮಾಡಲಾಗುವುದು ಎಂದು ಸಚಿವ ಶ್ರೀರಾಮುಲು ತಿಳಿಸಿದರು.

SCROLL FOR NEXT