ರಾಜ್ಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಗನ್ ಮ್ಯಾನ್ ಕೊರೋನಾದಿಂದ ಸಾವು

Raghavendra Adiga

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಗನ್ ಮ್ಯಾನ್ ಕೊರೋನಾ ಸೋಂಕಿನಿಂದ ಬುಧವಾರ ನಿಧನರಾದರು.

ಕಳೆದ ಹತ್ತು ವರ್ಷಗಳಿಂದ ಸತೀಶ್ ಜಾರಕಿಹೋಳಿ ಅವರಲ್ಲಿ ಗನ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದ ರಮೇಶ್ ಇತ್ತೀಚೆಗೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಮೇಶ್ ಅವರಿಂದು ಚಿಕಿತ್ಸೆ ಫಲಿಸದೆ ಅಸುನೀಗಿದ್ದಾರೆ.

ಇನ್ನು ಸತೀಶ್ ಅವರ ಸೋದರ ರಮೇಶ್ ಜಾರಕಿಹೋಳಿಗೆ ಸಹ ಕೊರೋನಾ ಸೋಂಕು ತಗುಲಿತ್ತು. ಸಂಸದ ಶ್ರೀನಿವಾಸ ಪ್ರಸಾದ್, ಸಚಿವ ಸುರೇಶ್ ಕುಮಾರ್ ಅವರ ಆಪ್ತ ಕಾರ್ಯದರ್ಶಿಗಳು ಸಹ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. 

SCROLL FOR NEXT