ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನ ಕೋವಿಡ್ ಸಾವು, ಪಾಸಿಟಿವ್ ಪ್ರಕರಣಗಳ ಅಂಕಿ ಅಂಶ ಹೆಚ್ಚು ಪಾರದರ್ಶಕ: ಅಧ್ಯಯನ

ಆರು ಬೃಹತ್ ನಗರಗಳಲ್ಲಿ - ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬೈ ನಗರಗಳ ಪೈಕಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಹೆಚ್ಚು ಪಾರದರ್ಶಕವಾಗಿದೆ..

ಬೆಂಗಳೂರು: ಆರು ಬೃಹತ್ ನಗರಗಳಲ್ಲಿ - ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಕೋಲ್ಕತಾ ಮತ್ತು ಮುಂಬೈ ನಗರಗಳ ಪೈಕಿ ಬೆಂಗಳೂರಿನಲ್ಲಿ ವರದಿಯಾದ ಕೋವಿಡ್ ಪ್ರಕರಣಗಳು ಮತ್ತು ಕೋವಿಡ್ ಸಾವಿನ ಸಂಖ್ಯೆ ಹೆಚ್ಚು ಪಾರದರ್ಶಕವಾಗಿದೆ ಎಂದು ಅಧ್ಯಯನವೊಂದು ಹೇಳಿದೆ.

ಜೀವನ್ ರಕ್ಷಾ ನಡೆಸಿದ ಅಧ್ಯಯನದ ಪ್ರಕಾರ, ಆರು ಮೆಗಾ ಸಿಟಿಗಳು ಜುಲೈನಲ್ಲಿ 36,688 ಕೋವಿಡ್ ಪ್ರಕರಣಗಳು ವರದಿಯಾಗಿವೆ.

ಆದಾಗ್ಯೂ, ಜನರಲ್ ಇನ್ಶೂರೆನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಈ ಆರು ಮೆಗಾ ನಗರಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 33,241 ಹೊಸ ಆರೋಗ್ಯ ವಿಮಾ ಹಕ್ಕುಗಳನ್ನು ನೋಂದಾಯಿಸಲಾಗಿದೆ. ಇದರರ್ಥ, ಜುಲೈನಲ್ಲಿ ಕೋವಿಡ್-ಪಾಸಿಟಿವ್ ರೋಗಿಗಳಲ್ಲಿ ಶೇ. 91 ರಷ್ಟು ಜನರು ಗುಂಪು ಅಥವಾ ವೈಯಕ್ತಿಕ ಆರೋಗ್ಯ ವಿಮೆ ಹೊಂದಿದ್ದರು(PM-JAY ಮತ್ತು ಇತರ ಸರ್ಕಾರಿ ಯೋಜನೆ ಫಲಾನುಭವಿಗಳನ್ನು ಹೊರತುಪಡಿಸಿ).

ರಾಜ್ಯವಾರು ಆರೋಗ್ಯ ವಿಮೆಯ ಐಆರ್ ಡಿಎ ವರದಿಯ ಪ್ರಕಾರ, ಭಾರತದ ಜನಸಂಖ್ಯೆಯ ಕೇವಲ ಶೇ. 2 ಜನರು ಮಾತ್ರ ಗುಂಪು / ವೈಯಕ್ತಿಕ ಆರೋಗ್ಯ ವಿಮೆ(ಸರ್ಕಾರೇತರ ಯೋಜನೆಗಳು) ವ್ಯಾಪ್ತಿಗೆ ಒಳಪಡುತ್ತಾರೆ. 
ಭಾರತದ ಮೆಗಾ ನಗರಗಳಲ್ಲಿನ ಶೇ. 10-20ರಷ್ಟು ಜನರು ಮಾತ್ರ ಕೋವಿಡ್ ಆರೋಗ್ಯ ವಿಮೆ ಲಾಭ ಪಡೆದಿದ್ದಾರೆ.

ಜುಲೈನಲ್ಲಿ ಅಹಮದಾಬಾದ್ ನಲ್ಲಿ 283 ಕೋವಿಡ್ ಪ್ರಕರಣಗಳು ವರದಿಯಾಗಿವೆ. ಆದರೆ ಕೋವಿಡ್‌ಗಾಗಿ 5,009 ಹೊಸ ವೈದ್ಯಕೀಯ ವಿಮಾ ಹಕ್ಕುಗಳನ್ನು ನೋಂದಾಯಿಸಲಾಗಿದೆ, ಇದು ವರದಿ ಮಾಡಿದ ಕೋವಿಡ್ ಪ್ರಕರಣಗಳಿಗಿಂತ 18 ಪಟ್ಟು ಹೆಚ್ಚಾಗಿದೆ ಮತ್ತು ಜುಲೈನಲ್ಲಿ 81 ಸಾವುಗಳು ದಾಖಲಾಗಿವೆ.

ಇನ್ನು ಬೆಂಗಳೂರಿನಲ್ಲಿ, 13,780 ಪ್ರಕರಣಗಳು ವರದಿಯಾಗಿವೆ ಮತ್ತು 4,991 ವಿಮೆ ಕ್ಲೇಮ್‌ ಮಾಡಲಾಗಿದ್ದು, ವಿಮಾ ಕ್ಲೈಮ್ ಶೇಕಡಾ 36ರಷ್ಟು ಇದೆ. 246 ಸಾವುಗಳು ಮತ್ತು 38 ವಿಮೆ ಕ್ಲೈಮ್‌ ಆದಿದ್ದು, ಇದು ಶೇ. 15 ರಷ್ಟು ಸಾವಿನ ಕ್ಲೈಮ್‌ಗಳನ್ನು ತೋರಿಸುತ್ತದೆ ಮತ್ತು ಇದು ಕಡಿಮೆ ಪ್ರಮಾಣವನ್ನು ಸೂಚಿಸುತ್ತದೆ ಎಂದು ವರದಿ ವಿವರಿಸಿದೆ.

"ಬೆಂಗಳೂರು ನಗರ ಕೋವಿಡ್ ಡೇಟಾ ಬಹಿರಂಗಪಡಿಸುವಿಕೆಗೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕ ಮೆಗಾ ನಗರವಾಗಿದೆ. ರಾಜ್ಯ ಕೋವಿಡ್ ಬುಲೆಟಿನ್ ನಿಂದ ಸ್ವತಂತ್ರವಾದ ಸಮಗ್ರ ದೈನಂದಿನ ಬುಲೆಟಿನ್ ನೀಡುವ ಏಕೈಕ ಬೃಹತ್ ನಗರ ಇದಾಗಿದ್ದು, ದೈನಂದಿನ ಪರೀಕ್ಷಾ ದತ್ತಾಂಶ ಮತ್ತು ಇತರ ನಿರ್ಣಾಯಕ ಡೇಟಾವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿದೆ ಎಂದು ಜೀವನ್ ರಕ್ಷಾದ ಸಂಚಾಲಕ ಸಂಜೀವ್ ಮೈಸೂರು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT