ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಸಮಾಧಾನ, ಕೆ- ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಮನೆ ಖರೀದಿದಾರರು 

 ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಬೆಂಗಳೂರು: ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ದಶಕಗಳಷ್ಟು ಹಳೆಯದಾದ ಅಪೂರ್ಣ ಯೋಜನೆಗಳು,  ಬಿಲ್ಡರ್‌ಗಳ ವಿಫಲತೆ ಮತ್ತು ಅಸಂಖ್ಯಾತ ಅಕ್ರಮಗಳ ನಡುವೆ ಅಧಿಕಾರಿಗಳ ಕಡೆಯಿಂದ ಕ್ರಮ ತೆಗೆದುಕೊಳ್ಳದಿರುವುದು, ಬಿಲ್ಡರ್ ಗಳಿಂದ ಅಕ್ರಮಗಳ ಸರಮಾಲೆ ಮತ್ತಿತರ ಕುಂದುಕೊರತೆಗಳನ್ನು  10 ಯೋಜನೆಗಳ ಸುಮಾರು 30 ಜನರು ದಾಖಲಿಸಿದರು. ಮನೆ ಖರೀದಿದಾರರು ಎಲ್ಲಾ ಸಮಸ್ಯೆಗಳಿಗೆ ಪ್ರಾಪರ್ಟಿಗಾಗಿ ಲಭ್ಯವಾಗುವ ಇಎಂಐ ಮತ್ತು ಸಾಲಗಳೇ ಕಾರಣಗಳಾಗಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಒಕ್ಕೂಟದ ಸದಸ್ಯ ಪದ್ಮನಾಭ ಚಾರ್, ಐದನೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ ಇಲ್ಲಿಗೆ ಬಂದು ಮನವಿ ಸಲ್ಲಿಸಲು ಪ್ರಯತ್ನಿಸಿದೇವು. ಆದರೆ, ಸಮಿತಿಯ ಯಾವುದೇ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಮ್ಮ ಕುಂದುಕೊರತೆಗಳನ್ನು ಯಾರು ಕೂಡಾ ಕೇಳಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು.

 ಹಾಗೆಯೇ ಇತರ ಖರೀದಿದಾರರು, ತಮ್ಮ ಯೋಜನೆಯು 2016 ರಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ, ಬಿಲ್ಡರ್‌ಗಳು ನಿರ್ಮಾಣದ ಅವಧಿಯನ್ನು ವಿಸ್ತರಿಸಿರುವುದಿಂದ ಎಲ್ಲ ಇತರ ಖರೀದಿದಾರರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಇತರ ಅನೇಕ ಮನೆ ಖರೀದಿದಾರರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮನೆ ಖರೀದಿದಾರರ ಸಮಸ್ಯೆ ಆಲಿಸಿ, ಪರಿಹರಿಸಲು ಪ್ರತಿ ತಿಂಗಳು ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಕೆ- ರೇರಾ ಕಾರ್ಯದರ್ಶಿ ಕೆ. ನಾಗೇಂದ್ರ ಪ್ರಸಾದ್ ಭರವಸೆ ನೀಡಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾತ್ರೋರಾತ್ರಿ ಶೋಧ; ಇತಿಹಾಸದಲ್ಲಿಯೇ ಮೊದಲ ಬಾರಿಗೆ 30 ಮೊಬೈಲ್ ಫೋನ್‌ಗಳು ವಶ!

SCROLL FOR NEXT