ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಅಸಮಾಧಾನ, ಕೆ- ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ ಮನೆ ಖರೀದಿದಾರರು 

 ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಬೆಂಗಳೂರು: ಪ್ರತಿಕ್ರಿಯೆ ನೀಡದೆ ಇದುದ್ದರಿಂದ ಬೇಸತ್ತ ಮನೆ ಖರೀದಿದಾರರು ತಮ್ಮ ವಿವಿಧ ಕುಂದಕೊರತೆಗಳನ್ನು ಬಗೆಹರಿಸುವಂತೆ ಕೆ. ರೇರಾ ಕಚೇರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ದಶಕಗಳಷ್ಟು ಹಳೆಯದಾದ ಅಪೂರ್ಣ ಯೋಜನೆಗಳು,  ಬಿಲ್ಡರ್‌ಗಳ ವಿಫಲತೆ ಮತ್ತು ಅಸಂಖ್ಯಾತ ಅಕ್ರಮಗಳ ನಡುವೆ ಅಧಿಕಾರಿಗಳ ಕಡೆಯಿಂದ ಕ್ರಮ ತೆಗೆದುಕೊಳ್ಳದಿರುವುದು, ಬಿಲ್ಡರ್ ಗಳಿಂದ ಅಕ್ರಮಗಳ ಸರಮಾಲೆ ಮತ್ತಿತರ ಕುಂದುಕೊರತೆಗಳನ್ನು  10 ಯೋಜನೆಗಳ ಸುಮಾರು 30 ಜನರು ದಾಖಲಿಸಿದರು. ಮನೆ ಖರೀದಿದಾರರು ಎಲ್ಲಾ ಸಮಸ್ಯೆಗಳಿಗೆ ಪ್ರಾಪರ್ಟಿಗಾಗಿ ಲಭ್ಯವಾಗುವ ಇಎಂಐ ಮತ್ತು ಸಾಲಗಳೇ ಕಾರಣಗಳಾಗಿವೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಒಕ್ಕೂಟದ ಸದಸ್ಯ ಪದ್ಮನಾಭ ಚಾರ್, ಐದನೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಎರಡು ವಾರಗಳ ಹಿಂದೆ ಇಲ್ಲಿಗೆ ಬಂದು ಮನವಿ ಸಲ್ಲಿಸಲು ಪ್ರಯತ್ನಿಸಿದೇವು. ಆದರೆ, ಸಮಿತಿಯ ಯಾವುದೇ ಸದಸ್ಯರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ನಮ್ಮ ಕುಂದುಕೊರತೆಗಳನ್ನು ಯಾರು ಕೂಡಾ ಕೇಳಲಿಲ್ಲ, ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದರು.

 ಹಾಗೆಯೇ ಇತರ ಖರೀದಿದಾರರು, ತಮ್ಮ ಯೋಜನೆಯು 2016 ರಲ್ಲಿ ಪೂರ್ಣಗೊಳ್ಳಬೇಕಾಗಿದ್ದರೂ, ಬಿಲ್ಡರ್‌ಗಳು ನಿರ್ಮಾಣದ ಅವಧಿಯನ್ನು ವಿಸ್ತರಿಸಿರುವುದಿಂದ ಎಲ್ಲ ಇತರ ಖರೀದಿದಾರರು ದೊಡ್ಡ ನಷ್ಟ ಅನುಭವಿಸುತ್ತಿದ್ದಾರೆ. ಇತರ ಅನೇಕ ಮನೆ ಖರೀದಿದಾರರು ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮನೆ ಖರೀದಿದಾರರ ಸಮಸ್ಯೆ ಆಲಿಸಿ, ಪರಿಹರಿಸಲು ಪ್ರತಿ ತಿಂಗಳು ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಕೆ- ರೇರಾ ಕಾರ್ಯದರ್ಶಿ ಕೆ. ನಾಗೇಂದ್ರ ಪ್ರಸಾದ್ ಭರವಸೆ ನೀಡಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT