ಸಾಂದರ್ಭಿಕ ಚಿತ್ರ 
ರಾಜ್ಯ

ಐತಿಹಾಸಿಕ ಹಂಪಿ ಬಗ್ಗೆ ಅವಹೇಳನ: ಮುಂದಿನ 24 ಗಂಟೆಗಳಲ್ಲಿ ಸ್ಯಾಂಡ್ ಅಪ್ ಕಾಮಿಡಿಯನ್ ಶ್ರವಣ್ ಪೊಲೀಸರ ಮುಂದೆ ಹಾಜರು

ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿ ಯಾಗಿ ಕಾಮಿಡಿ ಮಾಡಿದ ಆರೋಪ ಮೇಲೆ , ಬೆಂಗಳೂರಿನ ಸ್ಟ್ಯಾಂಡ್​ ಅಪ್​ ಕಾಮಿಡಿಯನ್ ಪಿ.​ ಶ್ರವಣ್​ ಮುಂದಿನ 24 ಗಂಟೆಯೊಳಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ: ಹಂಪಿ ಸ್ಮಾರಕಗಳ ಬಗ್ಗೆ ಅವಹೇಳನಕಾರಿ ಯಾಗಿ ಕಾಮಿಡಿ ಮಾಡಿದ ಆರೋಪ ಮೇಲೆ , ಬೆಂಗಳೂರಿನ ಸ್ಟ್ಯಾಂಡ್​ ಅಪ್​ ಕಾಮಿಡಿಯನ್ ಪಿ.​ ಶ್ರವಣ್​ ಮುಂದಿನ 24 ಗಂಟೆಯೊಳಗೆ ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಆತನ ಪೋಷಕರು ಮಾಹಿತಿ ನೀಡಿದ್ದಾರೆ.

ಹಂಪಿಯ ಐತಿಹಾಸಿಕ ಸಂಗೀತ ಸ್ತಂಭಗಳ ಬಗ್ಗೆ ಶ್ರವಣ್ ಅಸಭ್ಯವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ಸಂಘಟನೆಗಳು ಮತ್ತು ಮಾರ್ಗದರ್ಶಕರ ಸಂಘಗಳು ಹಂಪಿ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದವು.

ದೂರಿನ ಅನ್ವಯ ಪೊಲೀಸರು ಪಿ. ಶ್ರವಣ್ ಮತ್ತು ಕಾರ್ಯಕ್ರಮದ ಆಯೋಜಕ  ತರ್ಲೆ ಬಾಕ್ಸ್ ಕಂಪನಿಗೆ ಪೊಲೀಸರು ನೊಟೀಸ್ ನೀಡಿದ್ದರು,  ದೂರು ನೀಡಿದ ಸಂಘಟನೆಗಳ ಮುಖಂಡರೊಂದಿಗೆ ಆತನ ಪೋಷಕರು ಮಾತನಾಡಿದ್ದಾರೆ. “ಶ್ರಾವಣನ ಪೋಷಕರು ನಮಗೆ ದೂರವಾಣಿ ಕರೆ ಮಾಡಿ ಶ್ರವಣನನ್ನು ಕ್ಷಮಿಸುವಂತೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ.

ನಾವು ನೀಡಿರುವ ದೂರಿನ ಬಗ್ಗೆ  ದೃಢವಾಗಿದ್ದೇವೆ. ಪಿ. ಶ್ರವಣ್ ಪೊಲೀಸರ ಮುಂದೆ ಹಾಜರಾಗಬೇಕು. ದೇವಸ್ಥಾನದ ವಿರೂಪಾಕ್ಷ ದೇವರ ಮುಂದೆ ಆತ  ಕ್ಷಮೆ ಕೇಳಬೇಕು ಎಂದು ಕೆಲವು ಸ್ಥಳೀಯ ಮುಖಂಡರು ಮತ್ತು ಹಿರಿಯ ಮಾರ್ಗದರ್ಶಕರು ನಿರ್ಧರಿಸಿದ್ದಾರೆ ಎಂದು ವಿಜಯನಗರ ಸ್ಮಾರಕ ಸಂರಕ್ಷಣಾ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು. ಸದ್ಯ ಪೊಲೀಸರು ಸೈಬರ್ ಕ್ರೈಂ ಕಾಯ್ದೆಯಡಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ದೂರುದಾರರನ್ನು ಕಾರ್ಯಕ್ರಮ ಆಯಜಕರು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಎರಡೂ ಕಡೆಯವರು ಒಮ್ಮತದ ತೀರ್ಮಾನಕ್ಕೆ ಬಂದರೆ, ನಾವು ಪ್ರಕರಣವನ್ನು ವಿತ್ ಡ್ರಾ ಮಾಡುತ್ತೇವೆ, ಸದ್ಯಕ್ಕೆ ಆಯೋಜಕರು ಮತ್ತು ಶ್ರವಣ್  ನಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT