ರಾಜ್ಯ

ಮಂಗಳೂರು: ಕುಲಶೇಖರ- ಪಡೀಲ್ ರೈಲ್ವೆ ಸುರಂಗದ ಬಳಿ ಭೂಕುಸಿತ, ರೈಲು ಸಂಚಾರದಲ್ಲಿ ವ್ಯತ್ಯಯ

Raghavendra Adiga

ಮಂಗಳೂರು: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ದಕ್ಷಿಣ ರೈಲ್ವೆಗೆ ಸೇರಿದ ಕುಲಶೇಖರ- ಪಡೀಲ್ ರೈಲ್ವೆ ಸುರಂಗ ಮಾರ್ಗದ ಬಳಿ ಭಾರಿ ಭೂಕುಸಿತ ಸಂಭವಿಸಿದೆ.

ರೈಲ್ವೆ ಇಲಾಖೆ ಈ ಪ್ರದೇಶದಲ್ಲಿ ಸುರಕ್ಷಿತ  ತಡೆಗೋಡೆಯನ್ನು ನಿರ್ಮಿಸಿದ್ದರೂ, ಭೂಕುಸಿತವು ರೈಲ್ವೆ ಹಳಿಗಳ ಮೇಲೆ ಬೃಹತ್ ಮಣ್ಣಿನ ದಿಬ್ಬಗಳನ್ನು ನಿರ್ಮಿಸಿದೆ.

ಭೂಕುಸಿತದಿಂದಾಗಿ ಮಾರ್ಗದಲ್ಲಿನ ಎಲ್ಲಾ ರೈಲು ಸೇವೆಗಳಿಗೆ ತೊಂದರೆಯಾಗಿದೆ ಎಂದು ರೈಲ್ವೆ ಹೇಳಿದೆ. ಪ್ರಸ್ತುತ ರೈಲ್ವೆ ಹಳಿಯಲ್ಲಿನ ಮಣ್ಣನ್ನು ತೆರವುಗೊಳಿಸುವ ಕಾರ್ಯಗಳು ನಡೆಯುತ್ತಿವೆ.

SCROLL FOR NEXT