ರಾಜ್ಯ

ಕೋವಿಡ್ 3ನೇ ಅಲೆ ಆತಂಕ: ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ ನೀಡಲು ಸರ್ಕಾರ ನಿರ್ಧಾರ

Manjula VN

ಬೆಂಗಳೂರು: ಕೋವಿಡ್‌ 2ನೇ ಅಲೆ ವೇಳೆ ಆಮ್ಲಜನಕ ಕೊರತೆ ಎದುರಿಸಿದ್ದರಿಂದ ಮುಂದಿನ ದಿನದಲ್ಲಿ ಈ ಸಮಸ್ಯೆ ಎದುರಾಗದಂತೆ ಕ್ರಮಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಆಮ್ಲಜನಕ ಉತ್ಪಾದನಾ ಘಟಕ ಆರಂಭಿಸುವವರಿಗೆ ವಿಶೇಷ ಪ್ರೋತ್ಸಾಹ ನೀಡಲು ಮುಂದಾಗಿದೆ.

ಆಮ್ಲಜನಕ ಘಟಕ ಸ್ಥಾಪನೆ ಮಾಡುವವರಿಗೆ ಶೇ.25ರಷ್ಟುಬಂಡವಾಳ ಸಬ್ಸಿಡಿ, ವಿದ್ಯುತ್‌ ಶುಲ್ಕದಿಂದ ಮೂರು ವರ್ಷದವರೆಗೆ ಪೂರ್ಣ ವಿನಾಯಿತಿ, ಸ್ಟ್ಯಾಂಪ್‌ ಡ್ಯೂಟಿಯಿಂದ ಸಂಪೂರ್ಣ ವಿನಾಯಿತಿ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಸಚಿವ ಬಸವರಾಜ ಬೊಮ್ಮಾಯಿಯವರು, ಕೊರೋನಾ 2ನೇ ಅಲೆ ವೇಳೆ ರಾಜ್ಯವು ಆಕ್ಸಿಜನ್ ಕೊರತೆ ಸಮಸ್ಯೆ ಎದುರಿಸುತ್ತು. ಹೀಗಾಗಿ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಾಗಿದೆ. ಪ್ರಸ್ತುತ ರಾಜ್ಯದಲ್ಲಿ ಒಂಭತ್ತು ಆಮ್ಲಜನಕ ಉತ್ಪಾದನಾ ಘಟಕಗಳಿವೆ. ಈ ಪೈಕಿ ಆರು ಘಟಕಗಳು ಆಮ್ಲಜನಕ ಪೂರೈಕೆ ಮಾಡುತ್ತಿವೆ. 815 ಮೆಟ್ರಿನ್‌ ಟನ್‌ ಉತ್ಪಾದನಾ ಸಾಮರ್ಥ್ಯ ಇದ್ದು, 5780 ಮೆಟ್ರಿಕ್‌ ಟನ್‌ ಸಂಗ್ರಹಣಾ ಸಾಮರ್ಥ್ಯ ಇದೆ. ಈ ಎರಡನ್ನೂ ಹೆಚ್ಚಿಸಲು ಪ್ರೋತ್ಸಾಹ ನೀಡಲಾಗುವುದು ಎಂದು ಹೇಳಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಕೆಲ ನಿರ್ಧಾರಗಳು ಇಂತಿವೆ...

  • ಜೆಒಸಿ ಕೋರ್ಸ್​ಗಳನ್ನ ಪಿಯುಸಿ ತತ್ಸಮಾನವೆಂದು ಪರಿಗಣನೆ
  • ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಒಪ್ಪಿಗೆ* ಕೆಎಸ್​ಆರ್​ಪಿಯಿಂದ ಸಿವಿಲ್ ಪೊಲೀಸ್​ಗೆ ಬರಲು ಫಿಸಿಕಲ್ ಎಕ್ಸಾಂ ಕಡ್ಡಾಯ
  • ಗದಗದಲ್ಲಿ ಪಶು ವೈದ್ಯಕೀಯ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಹೆಚ್ಚವರಿ 30 ಕೋಟಿ ಸೇರಿದಂತೆ 80 ಕೋಟಿ ರೂ ಅನುದಾನ
  • 2022ರ ಫೆಬ್ರವರಿ 9ರಿಂದ 12ರವರೆಗೆ ವಿಶ್ವ ಬಂಡವಾಳ ‘ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕ 2021 ಅನ್ನು ಆಯೋಜಿಸಲು ಒಪ್ಪಿಗೆ
  • ರಾಜ್ಯದಲ್ಲಿ ಆಕ್ಸಿಜನ್ ಉತ್ಪಾದನೆ ಘಟಕಗಳನ್ನ ಹೆಚ್ಚಿಸಲು ವಿವಿಧ ಉತ್ತೇಜನಗಳಿರುವ ಕ್ರಮಕ್ಕೆ ಅನುಮೋದನೆ
  • ದಾಸನಪುರ ಎಪಿಎಂಸಿ ಮಳಿಗೆಗಳ ಬಾಡಿಗೆ ದರ ಇಳಿಕೆ
  • ಸಹಕಾರ ಸಂಘ, ಬ್ಯಾಂಕ್​ಗಳ ಪದಾಧಿಕಾರಿಗಳ ಚುನಾವಣೆ ನಡೆಸುವ ಪ್ರಸ್ತಾವನೆಗೆ ಒಪ್ಪಿಗೆ
  • 139 ಕೈದಿಗಳನ್ನ ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸು
  • ಬೆಳೆ ಸರ್ವೆಗೆ ಹೊಸ ಆ್ಯಪ್ ರಚನೆಗೆ ಒಪ್ಪಿಗೆ
SCROLL FOR NEXT