ಸಂಗ್ರಹ ಚಿತ್ರ 
ರಾಜ್ಯ

16ನೇ ವಯಸ್ಸಿಗೇ ಮಾನವ ಕಳ್ಳಸಾಗಣೆಗೆ ಬೆಂಗಳೂರು ಗ್ಯಾಂಗ್ ರೇಪ್ ಸಂತ್ರಸ್ತೆ ಬಲಿಪಶು!

ಆಕೆಗಿನ್ನೂ 19 ವರ್ಷ ವಯಸ್ಸು. ಅವಳು ಈಗಾಗಲೇ ಜೀವನದಲ್ಲಿ ಬಹುದೊಡ್ಡ ಆಘಾತ ಮತ್ತು ನಿಂದನೆಗೆ ಒಳಗಾಗಿದ್ದಾಳೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ನಾಲ್ವರು ದೇಶವಾಸಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶಿ ಯುವತಿಯನ್ನು 16 ವರ್ಷದವಳಿದ್ದಾಗಲೇ ಮಾನವ ಕಳ್ಳಸಾಗಣೆ ಮೂಲಕ ಕರೆತರಲಾಗಿದೆ ಎಂದು ವರದಿಯಾಗಿದೆ.

ಬೆಂಗಳೂರು: ಆಕೆಗಿನ್ನೂ 19 ವರ್ಷ ವಯಸ್ಸು. ಅವಳು ಈಗಾಗಲೇ ಜೀವನದಲ್ಲಿ ಬಹುದೊಡ್ಡ ಆಘಾತ ಮತ್ತು ನಿಂದನೆಗೆ ಒಳಗಾಗಿದ್ದಾಳೆ. ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ನಾಲ್ವರು ದೇಶವಾಸಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಂಗ್ಲಾದೇಶಿ ಯುವತಿಯನ್ನು 16 ವರ್ಷದವಳಿದ್ದಾಗಲೇ ಮಾನವ ಕಳ್ಳಸಾಗಣೆ ಮೂಲಕ ಕರೆತರಲಾಗಿದೆ ಎಂದು ವರದಿಯಾಗಿದೆ.

ಅಧಿಕೃತ ಮೂಲಗಳು ಟಿಎನ್‌ಐಇಗೆ ತಿಳಿಸಿರುವಂತೆ  ಆಕೆ ಢಾಕಾ ಬಳಿಯ ಸಣ್ಣ ಹಳ್ಳಿಯವಳು ಮತ್ತು ಮಾನವ ಕಳ್ಳಸಾಗಣೆಗೆ ಬಲಿಯಾಗಿದ್ದಾಳೆ.. “12 ನೇ ತರಗತಿವರೆಗೆ ಓದಿದ ಹುಡುಗಿ 10 ವರ್ಷಗಳ ಹಿಂದೆ ತನ್ನ ಹೆತ್ತವರನ್ನು ಕಳೆದುಕೊಂಡಳು. ಆಕೆಗೆ ಒಬ್ಬ ಸಹೋದರನಿದ್ದಾನೆ, ಅವನು ಮದ್ಯವ್ಯಸನಿ ಮತ್ತು ವಿವಾಹಿತ. ಯುವತಿ ಗ್ರಾಮದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆಂದು ತಿಳಿದ ನಂತರ ಅವನು ಅವಳನ್ನು ಮನೆಯಿಂದ ಹೊರಗೆ ಹಾಕಿದ್ದನು" ಎಂದು ಮೂಲಗಳು ತಿಳಿಸಿವೆ.

"ಬಾಲಕಿ 16 ವರ್ಷದವಳಿದ್ದಾಗ ದುಬೈಗೆ ತೆರಳಿ ಕಾಸ್ಮೆಟಿಕ್ಸ್ ಶಾಪ್ ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಅವಳು ತನ್ನ ಪಾಸ್ ಪೋರ್ಟ್ ಕಳೆದುಕೊಂಡಳು ಮತ್ತು ಅವಳು ಪೊಲೀಸ್ ದೂರು ನೀಡಲು ಹೋದಾಗ, ಅವಳ ವೀಸಾ ಅವಧಿ ಮುಗಿದಿದ್ದರಿಂದ ಹೆಚ್ಚು ಸಮಯ ಇದ್ದುದಕ್ಕಾಗಿ ಅವಳನ್ನು ಬಂಧಿಸಲಾಯಿತು. ನಂತರ ಆಕೆಯನ್ನು ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಯಿತು ”ಎಂದು ಮೂಲಗಳು ತಿಳಿಸಿವೆ.

"ಏಳು ತಿಂಗಳ ಹಿಂದೆ, ಅವಳು ಅಂತರರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದ ಭಾಗವಾಗಿರುವ ಕೆಲವು ಏಜೆಂಟರೊಂದಿಗೆ ಸಂಪರ್ಕದಲ್ಲಿದ್ದಳು. ಅಕ್ರಮವಾಗಿ ಭಾರತಕ್ಕೆ ಆಗಮಿಸಿದಳು. ಅವಳು ಹೈದರಾಬಾದ್‌ಗೆ ಹೋಗಿದ್ದಾಳೆ, ಅಲ್ಲಿ ಅವಳು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದಳು. ತನ್ನ ಗೆಳೆಯನನ್ನು ಭೇಟಿಯಾಗಲು ಅವಳು ಆಗಾಗ್ಗೆ ಕೋಳಿಕ್ಕೋಡ್ ಗೆ ಭೇಟಿ ನೀಡುತ್ತಾಳೆ ಮತ್ತು ಅವಳು ಒಂದೆರಡು ಸಂದರ್ಭಗಳಲ್ಲಿ ಗೋವಾಕ್ಕೂ ಹೋಗಿದ್ದಾಳೆ. ಅವಳು ಅದನ್ನೆಲ್ಲಾ ಹೇಳಲು ಬಯಸುವುದಿಲ್ಲ. ಆದರೆ ಅವಳ ನಿರೂಪಣೆಯಿಂದ, ಅವಳನ್ನು ಸಂಘಟಿತ ಮಾನವ ಕಳ್ಳಸಾಗಣೆ ಮಾಫಿಯಾ ಬಳಸಿಕೊಂಡಿದೆ ಎಂಬುದು ಸ್ಪಷ್ಟವಾಗಿದೆ, ಇದರಲ್ಲಿ ಬಾಂಗ್ಲಾದೇಶಿಗಳು ಮತ್ತು ಕೆಲವು ಸ್ಥಳೀಯ ಜನರು ಇದ್ದಾರೆ. ಈ ಗ್ಯಾಂಗ್ ಯುವತಿಯರನ್ನು ಕರೆತರುತ್ತದೆ ಹಾಗೂ ಅವರನ್ನು ಲೈಂಗಿಕ ವ್ಯಾಪಾರಕ್ಕೆ ತಳ್ಳುತ್ತದೆ” ಎಂದು ಮೂಲಗಳು ತಿಳಿಸಿವೆ.

“ಬೆಂಗಳೂರಿನಲ್ಲಿ, ಅವಳು ಮಸಾಜ್ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು ಎಂದು ವರದಿಯಾಗಿದೆ. ಈ ವರ್ಷದ ಆರಂಭದಲ್ಲಿ ಆಕೆಯನ್ನು ಸಿಸಿಬಿ ಬಂಧಿಸಿ ನಗರ ಪೊಲೀಸರಿಗೆ ಒಪ್ಪಿಸಿತು. ಜೀವನ್ ಬೀಮಾ ನಗರ ಪೊಲೀಸ್ ಠಾಣೆಯಲ್ಲಿ 1986 ರ ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆಕೆ ತನ್ನ ಗುಂಪಿನಲ್ಲಿ ಬಾಂಗ್ಲಾದೇಶದ ಕೆಲವು ಹುಡುಗಿಯರನ್ನು ಸಹ ಹೊಂದಿದ್ದಾಳೆ”.

"ರಾಮಮೂರ್ತಿ ನಗರದಲ್ಲಿ ಬಾಡಿಗೆ ಫ್ಲಾಟ್‌ನಲ್ಲಿ ಆಕೆಯ ಗುಂಪಿನ ನಡುವೆ ಆರ್ಥಿಕ ವಿವಾದ ಮತ್ತು ಆಂತರಿಕ ಸಮಸ್ಯೆ ಇದ್ದು  ಫ್ಲ್ಯಾಟ್‌ನ ಸುತ್ತಮುತ್ತಲಿನ ಜನರು ಅವರ ಅನುಮಾನಾಸ್ಪದ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಪೊಲೀಸರಿಗೆ ದೂರು ನೀಡಿದ್ದರು”.

ಇನ್ಸೈಡರ್ ಮಂಕಿ ಎಂಬ ನಿಯತಕಾಲಿಕದ ಪ್ರಕಾರ, ಬಾಂಗ್ಲಾದೇಶವು ವಿಶ್ವದಲ್ಲೇ ಅತಿ ಹೆಚ್ಚು ಮಾನವ ಕಳ್ಳಸಾಗಣೆ ನಡೆಯುವ ರಾಷ್ಟ್ರವಾಗಿದೆ. ಕಳ್ಳಸಾಗಾಣಿಕೆಗೆ ಒಳಗಾದ ಹೆಚ್ಚಿನ ಹುಡುಗಿಯರನ್ನು ಗಡಿಯುದ್ದಕ್ಕೂ ಅಕ್ರಮವಾಗಿ ಭಾರತಕ್ಕೆ ಕಳುಹಿಸಲಾಗುತ್ತದೆ, ಅಲ್ಲಿ ಅವರು ಲೈಂಗಿಕ ಕಾರ್ಯಕರ್ತೆಯರಾಗಿ ಕೆಲಸ ಮಾಡಲು ಒತ್ತಾಯಿಸಲ್ಪಡುತ್ತಾರೆ. 

ಅಶ್ಲೀಲ ಚಿತ್ರ ಕಾಯ್ದೆ ಮತ್ತು ಮಾನವ ಕಳ್ಳಸಾಗಣೆ ಕಾಯ್ದೆಯಡಿ ಬಾಂಗ್ಲಾದೇಶ ಪೊಲೀಸರು ಹತಿರ್ಜೀಲ್ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ರಿದೂಯ್ ಬೇಬೋ ಬಾಂಗ್ಲಾದೇಶದ ಟಿಕ್ ಟಾಕ್ ಸ್ಟಾರ್ ಮೂಲಕ ತೇಜಗಾಂವ್ ಪೊಲೀಸರು ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಪತ್ತೆ ಮಾಡಿದ್ದಾರೆ. ಢಾಕಾದ ಮೊಘಬಜಾರ್ ನಿವಾಸಿಯೊಬ್ಬರು ಅವನ ಗುರುತನ್ನು ಅವನ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು ವೀಡಿಯೊದಿಂದ ದೃಢಪಡಿಸಿದ್ದಾರೆ. ಬೇಬೋ ಇತ್ತೀಚೆಗೆ ಭಾರತಕ್ಕೆ ಬಂದಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

SCROLL FOR NEXT