ಚಂಗಡಿ ಗ್ರಾಮದಲ್ಲಿ ಸಮೀಕ್ಷಾ ಕಾರ್ಯ ನಡೆಸುತ್ತಿರುವ ಅರಣ್ಯಾಧಿಕಾರಿಗಳು 
ರಾಜ್ಯ

ಉತ್ತಮ ಜೀವನ ನಿರ್ವಹಣೆ ಭರವಸೆ: ಮಲೆ ಮಹದೇಶ್ವರ ಬೆಟ್ಟದ ದಟ್ಟಾರಣ್ಯ ಪ್ರದೇಶದಿಂದ ಹೊರಬಂದ ಅರಣ್ಯವಾಸಿಗಳು!

ಸರ್ಕಾರ ನೀಡಿದ್ದ ಉತ್ತಮ ಜೀವನ ನಿರ್ವಹಣೆಯ ಭರವಸೆಯನ್ನು ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 

ಬೆಂಗಳೂರು: ಸರ್ಕಾರ ನೀಡಿದ್ದ ಉತ್ತಮ ಜೀವನ ನಿರ್ವಹಣೆಯ ಭರವಸೆಯನ್ನು ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 

906.187 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಕೋರ್‌ ವಲಯ ಹಾಗೂ ನಿರ್ಣಾಯಕ ವನ್ಯಜೀವಿ ಆವಾಸದ ವ್ಯಾಪ್ತಿಯಲ್ಲಿ ಚಂಗಡಿ ಗ್ರಾಮ ಇದೆ. ಕಾಡೊಳಗಿನ ಈ ಚಂಗಡಿ ಗ್ರಾಮದಲ್ಲಿ ಸುಮಾರು 225 ಕುಟುಂಬಗಳು ವಾಸ ಮಾಡುತ್ತಿದ್ದು, ಇವರಲ್ಲಿ 18 ಆದಿವಾಸಿ ಕುಟುಂಬಗಳಿವೆ. ಒಟ್ಟಾರೆ ಇಲ್ಲಿನ ಕಾಡಿನೊಳಗೆ 1,562 ಜನರಿದ್ದಾರೆ. ಗ್ರಾಮವನ್ನು ಸ್ಥಳಾಂತರ ಮಾಡಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ನಡೆಸಿತ್ತು. ಅಲ್ಲಿನ ಅರಣ್ಯವಾಸಿಗಳ ಮನವೊಲಿಸಲು ಅರಣ್ಯಾಧಿಕಾರಿಗಳು ಸಾಕಷ್ಟು ಬಾರಿ ಯತ್ನ ನಡೆಸಿದ್ದರು. ಈ ಪ್ರಯತ್ನ ಕೊನೆಗೂ ಯಶಸ್ವಿಯಾಗಿದೆ. 

ಸರ್ಕಾರ ಭರವಸೆಗಳಿಗೆ ಒಪ್ಪಿರುವ ಅರಣ್ಯವಾಸಿಗಳು ಕೊನೆಗೂ ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶದಿಂದ ಹೊರಬರಲು ಒಪ್ಪಿಗೆ ನೀಡಿದ್ದಾರೆ. 

ಮಲೆ ಮಹದೇಶ್ವರ ದಟ್ಟಾರಣ್ಯ ಪ್ರದೇಶವನ್ನು 2013 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಣೆ ಮಾಡಲಾಗಿತ್ತು.  ಚಾಮರಾಜನಗರ ವಿಭಾಗದಲ್ಲಿ ಮೊದಲ ಬಾರಿಗೆ ಬುಡಕಟ್ಟು ಜನಾಂಗದವರ ಸ್ಥಳಾಂತರ ಮಾಡುವ ಕಾರ್ಯವನ್ನು ಆರಂಭಿಸಲಾಗಿತ್ತು. ಹಲವು ವರ್ಷಗಳ ಹಿಂದೆಯೇ ಅರಣ್ಯ ಇಲಾಖೆಯು ನಾಗರಹೊಳೆ, ಬಂಡೀಪುರ, ಕಾಳಿ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬುಡಕಟ್ಟು ಜನರ ಸ್ಥಳಾಂತರ ಮಾಡುವ ಕಾರ್ಯವನ್ನು ಆರಂಭಿಸಿತ್ತು. ಆದರೆ, ಕಾನೂನು ತೊಡಕು, ಆರ್ಥಿಕ ಸಮಸ್ಯೆ ಹಾಗೂ ರಾಜಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. 

ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಉಪ ಸಂರಕ್ಷಣಾಧಿಕಾರಿ ಯೆದುಕೊಂಡಲು ವಿ ಅವರು ಮಾತನಾಡಿ, ಹೆಣ್ಣೂರು ಟೌನ್ ಬಳಿ ರೂಪುಗೊಳ್ಳುತ್ತಿರುವ ಹಳ್ಳಿಗೆ ಪುನರ್ವಸತಿ ಕಲ್ಪಿಸಲು 350 ಕುಟುಂಬಗಳು ಒಪ್ಪಿಗೆ ನೀಡಿವೆ. ಈ ಜನರಿಗೆ ಪುನರ್ವಸತಿ ಕಲ್ಪಿಸಲು ಈಗಾಗಲೇ 450 ಎಖರೆ ಪ್ರದೇಶ ಭೂಮಿಯನ್ನು ಗುರ್ತಿಸಲಾಗಿದೆ. ಸಿಎಎಂಪಿಎಯ ರೂ.40-45 ಕೋಟಿ ಹಣವನ್ನು ಇದಕ್ಕಾಗಿ ಬಳಕೆ ಮಾಡಲಾಗುತ್ತದೆ. ಇದಕ್ಕಾಗಿ ಸರ್ಕಾರ ಅನುಮತಿಗಾಗಿ ಕಾಯಲಾಗುತ್ತಿದೆ. ಅಲ್ಲಿಯವರೆಗೆ ಸಮೀಕ್ಷೆಗಳನ್ನು ನಡೆಸುವುದು ದಾಖಲೆಗಳನ್ನು ಪರಿಶೀಲಿಸುವ ಕಾರ್ಯ ನಡೆಸಲಾಗುತ್ತಿರುತ್ತದೆ ಎಂದು ಹೇಳಿದ್ದಾರೆ. 

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಪರಿಸರ ಮತ್ತು ಅರಣ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ, ಸರ್ಕಾರದ ಭರವಸೆ ಒಪ್ಪಿ ಅರಣ್ಯದಿಂದ ಹೊರಬಂದ ಬುಡಕಟ್ಟು ಜನರು ಎರಡು ರೀತಿಯ ಪರಿಹಾರ ಪ್ಯಾಕೇಜ್ ಪಡೆಯಬಹುದಾದಿಗೆ. ರೂ.15 ಲಕ್ಷ ನಗದು ಅಥವಾ ಪುನರ್ವಸತಿ ಸೌಲಭ್ಯ ಪಡೆಯುವ ಆಯ್ಕೆಯನ್ನು ಸರ್ಕಾರ ನೀಡಿದೆ. ಪುನರ್ವಸತಿ ಪಡೆಯುವವರಿಗೆ ಹೊಲವನ್ನು ನೀಡಲಾಗುತ್ತಿದ್ದು, ಈ ಮೂಲಕ ಅವರಿಗೆ ಉದ್ಯೋಗ ಕೂಡ ದೊರಕಿದಂತಾಗುತ್ತದೆ ಎಂದು ತಿಳಿದುಬಂದಿದೆ. 

ಆದರೆ, ಸರ್ಕಾರದ ಪುನರ್ವಸತಿಯನ್ನು ಕೆಲವರು ತಿರಸ್ಕರಿಸಿದ್ದು, ಹಣ ಪಡೆದುಕೊಳ್ಳುವ ಮನಸ್ಸು ಮಾಡಿದ್ದಾರೆಂದು ತಿಳಿದುಬಂದಿದೆ. 

ಯೋಜನೆ ಯಶಸ್ವಿಗೊಳ್ಳಲು ಜನರ ಮನವೊಲಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಸರ್ಕಾರದ ಮೇಲೆ ಜನರ ನಂಬಿಕೆ ಹೆಚ್ಚಿಸಲು ಇದೊಂದು ಪ್ರಯತ್ನವಾಗಿದೆ. ಇದೊಂದು ಸಾಮಾಜಿಕ ಸಮಸ್ಯೆ ಕೂಡ ಆಗಿದ್ದು, ಅದನ್ನು ಸರಿಪಡಿಸಲೇಬೇಕಿದೆ. ಈ ಯೋಜನೆ ಯಶಸ್ವಿಯಾಗಿದ್ದೇ ಆದರೆ, ಇತರೆ ಅರಣ್ಯವಾಸಿಗಳೂ ಕೂಡ ಅರಣ್ಯ ತೊರೆದು ಹೊರಬರಲು ಮನಸ್ಸು ಮಾಡುತ್ತಾರೆಂದು ಯೆದುಕೊಂಡಲು ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT