ರಾಜ್ಯ

ಚಾಮರಾಜನಗರದಲ್ಲಿ ನಡೆದಿರುವುದು ಕ್ಷಮಿಸಲಾಗದ ದುರಂತ: ಸಿಟಿ ರವಿ 

Manjula VN

ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ಸಂಭವಿಸಿದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಕ್ಷಮಿಸಲಾಗದ ದುರಂತ. ಚಾಮರಾಜನಗರ ದುರಂತದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಆಗಲೇ ಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಹೇಳಿದ್ದಾರೆ. 

ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಸಂಭವಿಸಿದ ದುರಂತಗಳು ಕರ್ನಾಟಕದಲ್ಲೂ ಸಂಭವಿಸಿರುವುದು ನಿಜಕ್ಕೂ ದುರಾದೃಷ್ಟಕರ. ದೆಹಲಿ, ಮಹಾರಾಷ್ಟ್ರದಲ್ಲಿ ಸಂಭವಿಸಿದ ದುರಂತ ಇತರರಿಗೆ ಪಾಠವಾಗಿತ್ತು. ಆದರೆ, ಅವರು ಮಾಡಿದ ತಪ್ಪಿನಿಂದ ನಾವು ಪಾಠ ಕಲಿಯಲಿಲ್ಲ. ವಿರೋಧಪಕ್ಷಗಳ ದಾಳಿಯಿಂದ ನಾವು ಅತ್ಯಂತ ಸುರಕ್ಷಿತತೆಯಿಂದ ಸಮರ್ಥಿಸಿಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. 

ಇದೇ ವೇಳೆ ಮುಖ್ಯಮಂತ್ರಿ ಬಿ,.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ರಾಜೀನಾಮೆ ನೀಡಬೇಕೆಂಬ ಆಗ್ರಹಗಳನ್ನು ತಿರಸ್ಕರಿಸಿದ್ದಾರೆ, 

SCROLL FOR NEXT