ಸಾಂದರ್ಭಿಕ ಚಿತ್ರ 
ರಾಜ್ಯ

ಬೆಡ್ ಬ್ಲಾಕಿಂಗ್ ಹಗರಣ ಎಫೆಕ್ಟ್: ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು, ಬುಕ್ಕಿಂಗ್ ಮಾಡಲು ಪರದಾಟ!

ಕೋವಿಡ್ 19 ರೋಗಿಗಳಿಗೆ ಬೆಡ್ ಬುಕ್ ಮಾಡಲು ಕಷ್ಟವಾಗುತ್ತಿದ್ದರೇ ನೀವು ಟೆಲಿಕಾಲರ್ಸ್ ಮತ್ತು ಕೇವಲ ಅಧಿಕಾರಿಗಳನ್ನು ನಿಂದಿಸುವಂತಿಲ್ಲ, ಅವರ ಜೊತೆಗೆ ರಾಜಕಾರಣಿಗಳನ್ನು ತೆಗಳಬೇಕಾಗುತ್ತದೆ.

ಬೆಂಗಳೂರು: ಕೋವಿಡ್ 19 ರೋಗಿಗಳಿಗೆ ಬೆಡ್ ಬುಕ್ ಮಾಡಲು ಕಷ್ಟವಾಗುತ್ತಿದ್ದರೇ ನೀವು ಟೆಲಿಕಾಲರ್ಸ್ ಮತ್ತು ಕೇವಲ ಅಧಿಕಾರಿಗಳನ್ನು ನಿಂದಿಸುವಂತಿಲ್ಲ, ಅವರ ಜೊತೆಗೆ ರಾಜಕಾರಣಿಗಳನ್ನು ತೆಗಳಬೇಕಾಗುತ್ತದೆ.

ಏಕೆಂದರೆ ವಾರ್ ರೂಮ ನಲ್ಲಿ ಸಿಬ್ಬಂದಿ ಕೊರತೆಯಾಗಲು ಕಳೆದ ಎರಡು ದಿನಗಳ ಹಿಂದೆ ನಡೆದ ಹಗರಣ ಕಾರಣವಾಗಿದೆ ಎಂದು ನೋಡಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದಂಧೆ ಬಯಲಾದ ಮೇಲೆ ಕಚೇರಿಗೆ ಬರುವ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ, ಶೇ.55.20 ರಷ್ಟಿದ್ದ ಸಿಬ್ಬಂದಿ ಸಂಖ್ಯೆ ತೀರಾ ಕಡಿಮೆಯಾಗಿದೆ.

ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ತುಂಬಲು ವಿಫಲವಾಗಿರುವುದೇ ಇದಕ್ಕೆ ಕಾರಣ, ಸಿಬ್ಬಂದಿಗೆ ರಕ್ಷಣೆ ಸುರಕ್ಷತೆಯ ಭರವಸೆಯಿಲ್ಲ ಎಂದು ವಾರ್  ರೂಂ ನಲ್ಲಿ ಕೆಲಸ ಮಾಡುವ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಬೆಡ್ ಬುಕ್ಕಿಂಗ್ ದಂಧೆ ಬಯಲಾದ ಮೇಲೆ ಕೆಲ ಸಿಬ್ಬಂದಿ ಪೊಲೀಸ್ ವಿಚಾರಣೆಗೆ ಹಾಜರಾಗುತ್ತಿರುವುದು ಕೂಡ ಸಿಬ್ಬಂದಿ ಕೊರತೆಗೆ ಕಾರಣವಾಗಿದೆ, ಈ ಮೊದಲೇ ವಾರ್ ರೂಂ ನಲ್ಲಿ ಸಿಬ್ಬಂದಿ ಸಮಸ್ಯೆಯಿತ್ತು, ಈಗ ಮತ್ತಷ್ಟು ಸಿಬ್ಬಂದಿ ಸಂಖ್ಯೆ  ಕಡಿಮೆಯಾಗಿದೆ, ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ, ಕೆಲ ಸಿಬ್ಬಂದಿ ಮತ್ತು ವೈದ್ಯರನ್ನು ತನಿಖೆಗಾಗಿ ಪೊಲೀಸರು ಕರೆದಿದ್ದಾರೆ, ಕೆಲ ಕಂಪ್ಯೂಟರ್ ಗಳನ್ನು ತನಿಖೆಗಾಗಿ ಕೊಂಡೊಯ್ಯಲಾಗಿದೆ, ಹೀಗಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಒಂದು ವೇಳೆ ಜನರಿಗೆ ಬೆಡ್ ಸಿಗಲು ಸಾಧ್ಯವಾಗದಿದ್ದರೇ ಅವರು ಸರ್ಕಾರ, ರಾಜಕಾರಣಿಗಳು ಮತ್ತು ಅಧಿಕಾರಿಗಳನ್ನು ನಿಂದಿಸಬೇಕಾಗುತ್ತದೆ ಎಂದು ವಾರ್ ರೂಮ ನ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. ತಮಗೆ ತೊಂದರೆಯಾಗಬಹುದೆಂಬ ಭಯದಿಂದ ಹಲವು ಸಿಬ್ಬಂದಿ ಬೆಡ್ ಅಲಾಟ್ ಮಾಡಲು ಹೆದರುತ್ತಿದ್ದಾರೆ.

ಹೀಗಾಗಿ ಸಿಬ್ಬಂದಿ ಹಾಸಿಗೆ ಬುಕ್ ಮಾಡಲು ವೈದ್ಯರನ್ನೇ ಕೇಳುತ್ತಿದ್ದಾರೆ. ಜೊತೆಗೆ ಯಾವ ಆಸ್ಪತ್ರೆಯಲ್ಲಿ ಬೆಡ್ ಖಾಲಿಯಿದೆಯೋ ಅಲ್ಲಿಗೆ ನೇರವಾಗಿ ಹೋಗುವಂತೆ ರೋಗಿಗಳಿಗೆ ತಿಳಿಸುತ್ತಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆ ಬಯಲು ಮಾಡಿದ್ದು ಸದ್ಯ ಇದ್ದ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ, ಹಲವರು ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದೆ. ನಾವು ಕೇವಲ ಸಿಬ್ಬಂದಿ ಪರ ಮಾತನಾಡುತ್ತಿಲ್ಲ, ಅವರ ಕುಟುಂಬ ಕೂಡ ತೊಂದರೆಗೆ ಸಿಲುಕುತ್ತಿದೆ, ಹೀಗಾಗಿ ಅವರನ್ನು ಪ್ರೇರೇಪಿಸಬೇಕಾಗಿದೆ, ಕರೆ ಮಾಡಲು ಅವರು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ, ಇದು ರೋಗಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್​ಗೆ 61 ರನ್ ಗಳ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT