ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್ ಕೇರ್ ಸೆಂಟರ್ ಗಳನ್ನಾಗಿ ಬದಲಾಯಿಸಲು ಸಿದ್ಧ, ಆದರೆ ಸಿಬ್ಬಂದಿ ಬೇಕಲ್ಲ: ಹೋಟೆಲ್ ಮಾಲೀಕರ ಪ್ರಶ್ನೆ

ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನು ಮಾರ್ಪಡಿಸಲು ತಾವು ಸಿದ್ದರಿದ್ದೇವೆ. ಅದರೆ ಅಲ್ಲಿಗೆ ಬೇಕಾದ ಸೌಲಭ್ಯ ಹಾಗೂ ಸಿಬ್ಬಂದಿಗೆ ಏನು ವ್ಯವಸ್ಥೆ ಮಾಡುವಿರಿ ಎಂದು ಹೋಟೆಲ್ ಮಾಲೀಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಬೆಂಗಳೂರು: ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನು ಮಾರ್ಪಡಿಸಲು ತಾವು ಸಿದ್ದರಿದ್ದೇವೆ. ಅದರೆ ಅಲ್ಲಿಗೆ ಬೇಕಾದ ಸೌಲಭ್ಯ ಹಾಗೂ ಸಿಬ್ಬಂದಿಗೆ ಏನು ವ್ಯವಸ್ಥೆ ಮಾಡುವಿರಿ ಎಂದು ಹೋಟೆಲ್ ಮಾಲೀಕರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಹೋಟೆಲ್ ಅಸೋಷಿಯೇಷನ್, ಜೊತೆ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಬಿಬಿಎಂಪಿ ಅಧಿಕಾರಿಗಳು ನಡೆಸಿದ ವರ್ಚ್ಯೂವಲ್ ಸಭೆಯಲ್ಲಿ ಈ ಪ್ರಶ್ನೆ ಎತ್ತಲಾಯಿತು.

10 ಹೋಟೆಲ್ ಗಳ 1000 ರೂಂ ಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಬದಲಾಯಿಸುತ್ತೇವೆ, ಸರ್ಕಾರ 2000 ರೂಂ ಕೇಳಿದೆ. ಆದರೆ ಹೋಟೆಲ್ ಅಸೋಸಿಯೇಷನ್ 1,200 ರೂ ನೀಡಲು ನಿರ್ಧರಿಸಿದೆ.

ಬ್ಯುಸಿನೆಸ್ ಇಲ್ಲದ ಕಾರಣ ರೂಂ ಗಳು ಸಿದ್ದವಿದೆ., ಆದರೆ ಹೋಟೆಲ್ ರೂಂ ಗಳನ್ನು ಕೋವಿಡ್ ಕೇರ್ ಗಳನ್ನಾಗಿ ಮಾಡಲು ಸರ್ಕಾರದ ಬಳಿ ಅಗತ್ಯವಾದ ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿ, ಆಕ್ಸಿಜನ್ ಮತ್ತು ವೆಂಟಿಲೇಟರ್ ಗಳು ಇದೆಯೇ ಎಂದು ಹೋಟೆಲ್ ಮಾಲೀಕರ ಸಂಘದ ಸದಸ್ಯರೊಬ್ಬರು ಹೇಳಿದ್ದಾರೆ.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ, ನಮ್ಮ ವ್ಯವಹಾರವು ತುಂಬಾ ಕುಸಿದಿದೆ. ಹೋಟೆಲ್ ಸಿಸಿಸಿ ಆಗಿದ್ದರೆ, ಕ್ಯಾಟಗರಿ ಅವಲಂಬಿಸಿ, ಆಸ್ಪತ್ರೆಯು ಪ್ರತಿ ಹಾಸಿಗೆ 1,500- 2,200 ರೂ. ಹಣವನ್ನು ಕೊಠಡಿ ಬಾಡಿಗೆ ಮತ್ತು ಆಹಾರಕ್ಕಾಗಿ ಪಾವತಿಸಲಾಗುತ್ತದೆ. ತುಂಬಾ ಪ್ರಸಿದ್ದವಾದ ಆಸ್ಪತ್ರೆಯಾದರೇ  ದರಗಳು ಮತ್ತಷ್ಟು ಹೆಚ್ಚಿರುತ್ತದೆ. 

ಆದ್ದರಿಂದ ಇದು ಲಾಭದಾಯಕವಲ್ಲದಿದ್ದರೂ ಸಹ, ಹಣವು ಹೋಟೆಲ್ ಸಿಬ್ಬಂದಿಗಳ ವೇತನವನ್ನು ಪೂರೈಸಲು ಸಹಾಯ ಮಾಡುತ್ತದೆ,  ಆದ್ದರಿಂದ, ಹೋಟೆಲ್‌ಗಳು ಕೊಠಡಿಗಳನ್ನು ನೀಡಲು ಉತ್ಸುಕವಾಗಿವೆ, ಆದರೆ ಮೂಲಸೌಕರ್ಯಗಳ ಅಗತ್ಯವಿರುವುದರಿಂದ ಸಮಯ ತೆಗೆದುಕೊಳ್ಳುತ್ತಿವೆ. 

ಸಭೆಯಲ್ಲಿ, ಬಿಬಿಎಂಪಿ ವಲಯಗಳಲ್ಲಿ ಕೊಠಡಿಗಳೊಂದಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಲು ಮತ್ತು ಹಂತ ಹಂತವಾಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಬೊಮ್ಮಾಯಿ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದರು. ಕೆಪಿಎಂಇ ಕಾಯ್ದೆಯಡಿ ನೋಂದಾಯಿಸಲಾದ ಆಸ್ಪತ್ರೆಗಳು ತಮ್ಮ ನೆರೆಹೊರೆಯ ಹೋಟೆಲ್‌ಗಳೊಂದಿಗೆ ಹೊಂದಾಣಿಕೆ
ಮಾಡಿಕೊಳ್ಳಬಹುದು ಮತ್ತು ತಕ್ಷಣ ಆರೋಗ್ಯ ಸೌಲಭ್ಯವನ್ನು ಪ್ರಾರಂಭಿಸಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ  ಹೇಳಿದರು.

ಈ ಸೌಲಭ್ಯಗಳಿಗಾಗಿ ವೈದ್ಯರು ಮತ್ತು ದಾದಿಯರನ್ನು ಒದಗಿಸುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭರವಸೆ ನೀಡಿದರು. ಈ ಕೇಂದ್ರಗಳಲ್ಲಿ ನಿವೃತ್ತ ವೈದ್ಯರು ಮತ್ತು ವಿದ್ಯಾರ್ಥಿಗಳನ್ನು ಸಹ ಬಳಸಿಕೊಳ್ಳಲಾಗುವುದು. ಈಗಾಗಲೇ 13 ಆಸ್ಪತ್ರೆಗಳ ಸಹಾಯದಿಂದ ಸುಮಾರು 1,200 ಹೋಟೆಲ್ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷ ಪಿ ಸಿ ರಾವ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT