ಪಿಣರಾಯಿ ವಿಜಯನ್ 
ರಾಜ್ಯ

ಕೇರಳದ ಪಿಣರಾಯಿ ಸರ್ಕಾರದಿಂದ 'ಬಾಕಿ ವಸೂಲಿ'ಗಾಗಿ ಕಾಯುತ್ತಿರುವ ಮೈಸೂರು ರೈತರು!

ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.

ಮೈಸೂರು: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.

ಪ್ರವಾಹ, ಲಾಕ್ ಡೌನ್ ಸೇರಿದಂತೆ ಹಲವು ಕಷ್ಟದ ಸಮಯದಲ್ಲಿ ಮೈಸೂರು ಭಾಗದ ಕೆಲ ರೈತರು ನೇರವಾಗಿ ಕೇರಳಕ್ಕೆ ಹಣ್ಣು ತರಕಾರಿ ಸರಬರಾಜು ಮಾಡಿದ್ದರು. ಆದರೆ ಕಳೆದ ಡಿಸೆಂಬರ್ ನಿಂದ ಇದುವರೆಗೂ 54.23 ಲಕ್ಷ ರು. ಹಣವನ್ನು ಸರ್ಕಾರ ರೈತರಿಗೆ ಪಾವತಿ ಮಾಡಿಲ್ಲ,

ಮೈಸೂರಿನ 1,200 ರೈತರು ರೈತಮಿತ್ರ ಕಂಪನಿ ಮೂಲಕ ತಮ್ಮ ಉತ್ಪನ್ನಗಳನ್ನು ಕೇರಳ ರಾಜ್ಯ ತೋಟಗಾರಿಕಾ ಉತ್ಪನ್ನಗಳ ಅಭಿವೃದ್ಧಿ ನಿಗಮಕ್ಕೆ ಸಾಗಣೆ ಮಾಡಿದ್ದರು. 

ತರಕಾರಿಗಳ ನಿರಂತರ ಪೂರೈಕೆಗಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ತರಕಾರಿಗಳನ್ನು ಸಾಗಿಸಲು ಸಾಗಣೆಗಾಗಿ ಸಾಮಾನ್ಯ ಮೊತ್ತಕ್ಕಿಂತ ದುಪ್ಪಟ್ಟು ಪಾವತಿಸಿದ್ದೇವೆ.

ಪ್ರವಾಹದ ಸಮಯದಲ್ಲಿ, ನಾವು ತರಕಾರಿನ್ನು ಕೊಯಮತ್ತೂರು ಮೂಲಕ ರವಾನಿಸಿದ್ದೇವೆ ಮತ್ತು ಅವರು ತಲುಪುವಂತೆ ನೋಡಿಕೊಂಡಿದ್ದೇವೆ ”ಎಂದು ಎಫ್‌ಪಿಒ ಮುಖ್ಯಸ್ಥರಾಗಿರುವ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

ಪ್ರವಾಹದ ಸಮಯದಲ್ಲಿ, ಅವರು ಎಲ್ಲಾ ಸದಸ್ಯ ರೈತರಿಂದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದರು ಮತ್ತು ಕೇರಳ ಸಿಎಂನ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

Video: 80 ಸಾವಿರ ಹಣವಿದ್ದ ಬ್ಯಾಗ್ ನಾಪತ್ತೆ, ಮೇಲಿಂದ ಕೋತಿಯಿಂದ ಹಣದ ಸುರಿಮಳೆ! ಸಿಕ್ಕಿದೆಷ್ಟು ಗೊತ್ತಾ?

SCROLL FOR NEXT