ಪಿಣರಾಯಿ ವಿಜಯನ್ 
ರಾಜ್ಯ

ಕೇರಳದ ಪಿಣರಾಯಿ ಸರ್ಕಾರದಿಂದ 'ಬಾಕಿ ವಸೂಲಿ'ಗಾಗಿ ಕಾಯುತ್ತಿರುವ ಮೈಸೂರು ರೈತರು!

ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.

ಮೈಸೂರು: ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಮತ್ತೆ ಕೇರಳದಲ್ಲಿ ಅಧಿಕಾರಕ್ಕೆ ಬರುತ್ತಿದ್ದು, ಕೆಲ ರೈತರು ಸರ್ಕಾರ ಪ್ರಮಾಣ ವಚನ ಸ್ವೀಕರಿಸುವುದನ್ನು ಕಾಯುತ್ತಿದ್ದಾರೆ.

ಪ್ರವಾಹ, ಲಾಕ್ ಡೌನ್ ಸೇರಿದಂತೆ ಹಲವು ಕಷ್ಟದ ಸಮಯದಲ್ಲಿ ಮೈಸೂರು ಭಾಗದ ಕೆಲ ರೈತರು ನೇರವಾಗಿ ಕೇರಳಕ್ಕೆ ಹಣ್ಣು ತರಕಾರಿ ಸರಬರಾಜು ಮಾಡಿದ್ದರು. ಆದರೆ ಕಳೆದ ಡಿಸೆಂಬರ್ ನಿಂದ ಇದುವರೆಗೂ 54.23 ಲಕ್ಷ ರು. ಹಣವನ್ನು ಸರ್ಕಾರ ರೈತರಿಗೆ ಪಾವತಿ ಮಾಡಿಲ್ಲ,

ಮೈಸೂರಿನ 1,200 ರೈತರು ರೈತಮಿತ್ರ ಕಂಪನಿ ಮೂಲಕ ತಮ್ಮ ಉತ್ಪನ್ನಗಳನ್ನು ಕೇರಳ ರಾಜ್ಯ ತೋಟಗಾರಿಕಾ ಉತ್ಪನ್ನಗಳ ಅಭಿವೃದ್ಧಿ ನಿಗಮಕ್ಕೆ ಸಾಗಣೆ ಮಾಡಿದ್ದರು. 

ತರಕಾರಿಗಳ ನಿರಂತರ ಪೂರೈಕೆಗಾಗಿ ನಾವು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ತರಕಾರಿಗಳನ್ನು ಸಾಗಿಸಲು ಸಾಗಣೆಗಾಗಿ ಸಾಮಾನ್ಯ ಮೊತ್ತಕ್ಕಿಂತ ದುಪ್ಪಟ್ಟು ಪಾವತಿಸಿದ್ದೇವೆ.

ಪ್ರವಾಹದ ಸಮಯದಲ್ಲಿ, ನಾವು ತರಕಾರಿನ್ನು ಕೊಯಮತ್ತೂರು ಮೂಲಕ ರವಾನಿಸಿದ್ದೇವೆ ಮತ್ತು ಅವರು ತಲುಪುವಂತೆ ನೋಡಿಕೊಂಡಿದ್ದೇವೆ ”ಎಂದು ಎಫ್‌ಪಿಒ ಮುಖ್ಯಸ್ಥರಾಗಿರುವ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಹೇಳಿದ್ದಾರೆ.

ಪ್ರವಾಹದ ಸಮಯದಲ್ಲಿ, ಅವರು ಎಲ್ಲಾ ಸದಸ್ಯ ರೈತರಿಂದ 5 ಲಕ್ಷ ರೂ.ಗಳನ್ನು ಸಂಗ್ರಹಿಸಿದರು ಮತ್ತು ಕೇರಳ ಸಿಎಂನ ಪರಿಹಾರ ನಿಧಿಗೆ ದೇಣಿಗೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು; ಪ್ರತಿಭಟಿಸುವುದಾದರೇ ಸದನದ ಬಾವಿಗೆ ಬನ್ನಿ: ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ, ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!