ಕೊಪ್ಪಳದ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಆಕ್ಸಿಜನ್ ಘಟಕದ ಮಾದರಿ 
ರಾಜ್ಯ

ಡಿಆರ್ ಡಿಒದ ಮೊದಲ ಮೂರು ಆಕ್ಸಿಜನ್ ತಯಾರಿಕಾ ಘಟಕ ಕಾರ್ಯನಿರ್ವಹಣೆಗೆ ಸಿದ್ದ, ಈ ತಿಂಗಳಾಂತ್ಯಕ್ಕೆ ಆರಂಭ 

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್ ಡಿಒ) ವತಿಯಿಂದ ಮೊದಲ ಮೂರು ವೈದ್ಯಕೀಯ ಆಕ್ಸಿಜನ್ ಘಟಕಗಳು ರಾಜ್ಯದಲ್ಲಿ ಈ ತಿಂಗಳಾಂತ್ಯದಲ್ಲಿ ಕಾರ್ಯನಿರ್ವಹಣೆ ಆರಂಭಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಘಟಕಗಳ ಕೆಲಸವನ್ನು ಮುಗಿಸಿದ್ದು ಮೂರನೆ ಘಟಕ ಸಿದ್ದವಾಗುತ್ತಿದೆ.

ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್ ಡಿಒ) ವತಿಯಿಂದ ಮೊದಲ ಮೂರು ವೈದ್ಯಕೀಯ ಆಕ್ಸಿಜನ್ ಘಟಕಗಳು ರಾಜ್ಯದಲ್ಲಿ ಈ ತಿಂಗಳಾಂತ್ಯದಲ್ಲಿ ಕಾರ್ಯನಿರ್ವಹಣೆ ಆರಂಭಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಎರಡು ಘಟಕಗಳ ಕೆಲಸವನ್ನು ಮುಗಿಸಿದ್ದು ಮೂರನೆ ಘಟಕ ಸಿದ್ದವಾಗುತ್ತಿದೆ.

ಕೈಗೆಟಕುವ ದರದಲ್ಲಿ ಈ ಘಟಕಗಳು ಆಕ್ಸಿಜನ್ ಉತ್ಪತ್ತಿ ಮಾಡಲಿವೆ. ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮತ್ತು ತಾಂತ್ರಿಕ ಪ್ರಧಾನ ವ್ಯವಸ್ಥಾಪಕ ಎಸ್ ಪಿ ಸೋಮಶೇಖರ್, 600 ಚದರ ಅಡಿ ವಿಸ್ತೀರ್ಣದಲ್ಲಿ ಕಾಂಕ್ರೀಟ್ ರಚನೆಯನ್ನು ಮಾಡಲಾಗುತ್ತಿದ್ದು ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಕಲಬುರಗಿಯ ಇಎಸ್ ಐ ಆಸ್ಪತ್ರೆಯಲ್ಲಿ ಕೆಲಸ ಮುಗಿದಿದೆ. ಮೂರನೇ ಘಟಕ ಬೆಂಗಳೂರಿನ ಸಿ ವಿ ರಾಮನ್ ಕೇಂದ್ರದಲ್ಲಿ ತಯಾರಾಗುತ್ತಿದ್ದು ಈ ವಾರಾಂತ್ಯಕ್ಕೆ ಸೇವೆಗೆ ಬಿಟ್ಟುಕೊಡಲಿದ್ದೇವೆ ಎಂದು ತಿಳಿಸಿದರು.

ಈ ಘಟಕದಲ್ಲಿ ಆಕ್ಸಿಜನ್ ಟ್ಯಾಂಕ್ ಮತ್ತು ಕಂಪ್ರೆಸ್ಸರ್ ಹಾಗೂ ವಿದ್ಯುತ್ ಉಪಕರಣಗಳು ಇರುತ್ತವೆ. ಸಾವಿರ ಲೀಟರ್ ವರೆಗೆ ಆಕ್ಸಿಜನ್ ನ್ನು ಪ್ರತಿ ನಿಮಿಷಕ್ಕೆ ಉತ್ಪತ್ತಿ ಮಾಡಲಿದೆ ಎಂದು ಹೇಳಿದರು.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಡಿಆರ್ ಡಿಒ ವಕ್ತಾರ, ವೈದ್ಯಕೀಯ ಆಕ್ಸಿಜನ್ ಘಟಕ ತಂತ್ರಜ್ಞಾನವನ್ನು ಬಳಸಲಾಗುತ್ತಿದ್ದು, ಅದನ್ನು ಡಿಆರ್ ಡಿಒ ಅಭಿವೃದ್ಧಿಪಡಿಸಿದೆ. ಇದನ್ನು ಡಿಆರ್‌ಡಿಒ ತನ್ನ ಲಘು ಯುದ್ಧ ವಿಮಾನವಾದ ತೇಜಸ್‌ನಲ್ಲಿ ಹಡಗಿನಲ್ಲಿ ಆಮ್ಲಜನಕವನ್ನು ಉತ್ಪಾದಿಸಲು ಅಭಿವೃದ್ಧಿಪಡಿಸಿದೆ. “ಈ ವ್ಯವಸ್ಥೆಯು 190 ರೋಗಿಗಳನ್ನು ನಿಮಿಷಕ್ಕೆ 5 ಲೀಟರ್ ಹರಿವಿನ ದರದಲ್ಲಿ ಪೂರೈಸಬಲ್ಲದು ಮತ್ತು ದಿನಕ್ಕೆ 195 ಸಿಲಿಂಡರ್‌ಗಳನ್ನು ನೀಡುತ್ತದೆ.

ಇಂತಹ 500 ಘಟಕಗಳನ್ನು ದೇಶಾದ್ಯಂತ ಮೂರು ತಿಂಗಳಲ್ಲಿ ಸಿದ್ಧಪಡಿಸಬೇಕಾಗಿತ್ತು, ಸ್ಥಳದ ಲಭ್ಯತೆಯಿಲ್ಲದ ಕಾರಣ ನಿಜವಾದ ಸಂಖ್ಯೆ ಕಡಿಮೆ ಇರಬಹುದು ಎಂದು ಮೂಲವೊಂದು ತಿಳಿಸಿದೆ. ವೈದ್ಯಕೀಯ ಆರೋಗ್ಯದ ರಾಜ್ಯ ಉಪನಿರ್ದೇಶಕ ಡಾ. ಸೆಲ್ವರಾಜ್,ಒಟ್ಟು 31 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ ತಂತ್ರಜ್ಞಾನ ಘಟಕಗಳನ್ನು ಈಗಿನವರೆಗೆ ಅನುಮೋದಿಸಲಾಗಿದೆ. ಅವರು ನಿಮಿಷಕ್ಕೆ 22,500 ಲೀಟರ್ ಆಮ್ಲಜನಕವನ್ನು ಸಂಪೂರ್ಣವಾಗಿ ಉತ್ಪಾದಿಸುತ್ತದೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT