ಸಾಂದರ್ಭಿಕ ಚಿತ್ರ 
ರಾಜ್ಯ

ಕೊಡವ ಮದುವೆಗಳಿಗೆ ಹಲವು ನಿರ್ಬಂಧಗಳನ್ನು ವಿಧಿಸಿದ ವಿರಾಜಪೇಟೆ ಕೊಡವ ಸಮಾಜ

ಕೊಡವ ವಿವಾಹ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.

ಮಡಿಕೇರಿ: ಕೊಡವ ವಿವಾಹ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಸಾಂಪ್ರದಾಯಿಕವಲ್ಲದ ಆಚರಣೆಗಳು ಎಂದಿರುವ ವಿರಾಜಪೇಟೆಯ ಕೊಡವ ಸಮಾಜ ಅವುಗಳನ್ನು ನಿಷೇಧಿಸಿದೆ.

ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಬಳಸುವುದು ಮದುವೆಯ ಸಮಯದಲ್ಲಿ ಆಚರಿಸುವ ಮೂಲ ಆಚರಣೆ ಮತ್ತು ಸಂಪ್ರದಾಯಗಳಲ್ಲ ಎಂದಿರುವ ಸಂಸ್ಥೆಯು, ಸಮಾರಂಭದಲ್ಲಿ ವಧು ಮತ್ತು ವರನಿಗೆ ಹಲವಾರು ಇತರ ನಿರ್ಬಂಧಗಳನ್ನು ವಿಧಿಸಿದೆ.

ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ ಅಧ್ಯಕ್ಷತೆಯಲ್ಲಿ ನಡೆದ 99ನೇ ಮಹಾಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಬಂಧಗಳನ್ನು ವಿಧಿಸಲಾಗಿದೆ.

ಕೊಡವ ಮದುಮಗನು ಮದುವೆಯ ಸಂದರ್ಭದಲ್ಲಿ ಗಡ್ಡ ಇರಬಾರದು ಎಂಬ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದು ಕೊಡವ ಸಂಸ್ಕೃತಿಗೆ ವಿರುದ್ಧವಾಗಿದೆ. ವರನು ತನ್ನ ಮದುವೆ ಸಮಾರಂಭದಲ್ಲಿ ಕ್ಲೀನ್ ಶೇವ್ ಲುಕ್‌ನಲ್ಲಿ ಮಾತ್ರ ಭಾಗವಹಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ, ಮದುವೆಗೆ ಹಾಜರಾಗಿ ದಂಪತಿಗಳನ್ನು ಆಶೀರ್ವದಿಸುವ ಮಹಿಳೆಯರು ತಮ್ಮ ಕೂದಲನ್ನು ಓಪನ್ ಬಿಡಲು ಅವಕಾಶ ಇಲ್ಲ ಮತ್ತು ಕೂದಲನ್ನು ಪ್ಲೇಟ್ ಮಾಡಲು ಕಡ್ಡಾಯಗೊಳಿಸಲಾಗಿದೆ ಮತ್ತು ಚಿಕ್ಕ ಕೂದಲಿನ ಸಂದರ್ಭದಲ್ಲಿ ಅವರು ತಲೆಗೆ ಬಟ್ಟೆಯನ್ನು ಸುತ್ತಿಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.

"ಕೊಡವ ಸಂಪ್ರದಾಯದ ಅಂತ್ಯ ಸಂಸ್ಕಾರದ ವೇಳೆ ಮಾತ್ರ ಮಹಿಳೆಯರು ಕೂದಲು ಓಪನ್ ಬಿಡುತ್ತಾರೆ ಎಂಬ ಕಾರಣದಿಂದ ಈ ನಿರ್ಧಾರವನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಸದಸ್ಯರು ವಿವರಿಸಿದ್ದಾರೆ.

ಗಂಗಾಪೂಜೆಯ ವೇಳೆ ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ ಮತ್ತು ಸಾಂಪ್ರದಾಯಿಕ ಡೋಲು ‘ದೇವತ್’ ಬಳಸಿ ‘ವಾಲಗ’ದ ಸಾಂಪ್ರದಾಯಿಕ ಸಂಗೀತವನ್ನು ನುಡಿಸುವುದನ್ನು ನಿಷೇಧಿಸಲಾಗಿದೆ. ಇದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮಾರಂಭಕ್ಕೆ ರಾತ್ರಿ 10 ಗಂಟೆಗೆ ಗಡುವು ನಿಗದಿಪಡಿಸಲಾಗಿದೆ. ಅಲ್ಲದೆ, ಯಾವುದೇ ಕೊಡವ ಹುಡುಗಿ ಬೇರೆ ಸಮುದಾಯದ ವರನನ್ನು ಮದುವೆಯಾದರೆ, ವರನಿಗೆ ಕೊಡವ ಸಾಂಪ್ರದಾಯಿಕ 'ಕುಪ್ಯಾಚಾಲೆ' ಮತ್ತು ಸಾಂಪ್ರದಾಯಿಕ 'ಪಥಕ್' ಆಭರಣ ಧರಿಸುವುದನ್ನು ನಿಷೇಧಿಸಲಾಗಿದೆ. 

ಈ ಹಿಂದೆ, ಪೊನ್ನಂಪೇಟೆ ಕೊಡವ ಸಮಾಜವು ಮದುವೆಗಳ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ಹಾಕಿತ್ತು, ಈ ನಿರ್ಧಾರಗಳು ಕೊಡವ ಆಚರಣೆ ಮತ್ತು ಸಂಪ್ರದಾಯವನ್ನು ರಕ್ಷಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

SCROLL FOR NEXT