ರಾಜ್ಯ

ಜಿಎಸ್‍ಟಿ ದರ ನಿಗದಿ ಕುರಿತು ಸಿಎಂ ಬೊಮ್ಮಾಯಿ ಮಹತ್ವದ ಸಭೆ

Nagaraja AB

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್‍ಟಿ ದರ ನಿಗದಿಗೊಳಿಸುವ ಸಂಬಂಧ ಗೃಹ ಕಚೇರಿ ಕೃಷ್ಣದಲ್ಲಿ ಇಂದು  ಮಹತ್ವದ  ಸಭೆ ಜರುಗಿತು. 

ಪಶ್ಚಿಮ ಬಂಗಾಳ, ಕೇರಳ, ಗೋವಾ, ಬಿಹಾರ, ಉತ್ತರಪ್ರದೇಶ, ರಾಜಸ್ಥಾನದ  ಹಣಕಾಸು ಸಚಿವರು ಹಾಗೂ ಆ ರಾಜ್ಯಗಳ ಹಿರಿಯ ಅಧಿಕಾರಿಗಳು  ಸಭೆಯಲ್ಲಿ ಪಾಲ್ಗೊಂಡಿದ್ದರು.

ಐದು ತಾಸುಗಳ ಕಾಲ ನಡೆದ ವರ್ಚುಯಲ್  ಸಭೆಯಲ್ಲಿ  ಕೇಂದ್ರದ ಸಹಕಾರದೊಂದಿಗೆ ರಾಜ್ಯದ ಹಣಕಾಸು ಪರಿಸ್ಥಿತಿ ಸುಧಾರಣೆ, ಜಿಎಸ್‍ಟಿ ಮೂಲಕ ಆರ್ಥಿಕ ಪರಿಸ್ಥಿತಿ ಹೆಚ್ಚಳ ಮತ್ತು ಮುಂದಿನ ಮೂರು ತಿಂಗಳ ಆರ್ಥಿಕ ಗುರಿ ಸಾಧಿಸುವ ಸಂಬಂಧ ಚರ್ಚಿಸಲಾಯಿತು.

SCROLL FOR NEXT