ಮಾರುತಿ ಭೋಯಿ 
ರಾಜ್ಯ

ಪಿಎಫ್ ಸಂಘಟನೆಯ ಬೆಂಗಳೂರು ವಲಯ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಮಾರುತಿ ಭೋಯಿ ಅಧಿಕಾರ

ಭವಿಷ್ಯ ನಿಧಿ ಸಂಘಟನೆಯ ಬೆಂಗಳೂರು ವಲಯದ ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಶ್ರೀಯುತ ಮಾರುತಿ ಭೋಯಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಬೆಂಗಳೂರು: ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರು (ಕರ್ನಾಟಕ ಮತ್ತು ಗೋವಾ), ಹುಬ್ಬಳ್ಳಿ ವಲಯದ ಶ್ರೀಯುತ ಮಾರುತಿ ಭೋಯಿ ರವರು ಭವಿಷ್ಯ ನಿಧಿ ಸಂಘಟನೆಯ ಬೆಂಗಳೂರು ವಲಯದ ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 

ಶ್ರೀಯುತ ಮಾರುತಿ ಭೋಯಿ ರವರು ಭವಿಷ್ಯ ನಿಧಿಗೆ ಸೇರುವ ಮೊದಲು ಭಾರತೀಯ ವಾಯುಸೇನೆ ಮತ್ತು ಕೇಂದ್ರೀಯ ಅಬಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. 1997ರಲ್ಲಿ ಭವಿಷ್ಯ ನಿಧಿ ಸಂಘಟನೆಗೆ ಸಹಾಯಕ ಭವಿಷ್ಯ ನಿಧಿ ಆಯುಕ್ತರಾಗಿ ಸೇರಿದ ಅವರು ಕೊಚ್ಚಿನ್, ನಿಜಾಮಾಬಾದ್, ಸೇಲಂ, ಗೌಹಾಟಿ, ಉಡುಪಿ, ವೇಲೂರು, ಗುಲ್ಬರ್ಗ, ಮಂಗಳೂರು ಮುಂತಾದ ಕಛೇರಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರು ಕರ್ನಾಟಕದ ಹಾವೇರಿ ಜಿಲ್ಲೆಯ ಸಾವನೂರಿನಲ್ಲಿ ತಮ್ಮ ಹೈ ಸ್ಕೂಲ್ ಶಿಕ್ಷಣವನ್ನು ಪೂರೈಸಿದ್ದರು.

ಶ್ರೀಯುತ ಮಾರುತಿ ಭೋಯಿ ರವರು 27/10/2003ರಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-II ಮತ್ತು 08/02/2013ರಲ್ಲಿ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು-I ಆಗಿ ಬಡ್ತಿ ಹೊಂದಿದ್ದರು. ಅಪರ ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾಗಿ 24/07/2019ರಲ್ಲಿ ಬಡ್ತಿ ಹೊಂದಿ ಭವಿಷ್ಯ ನಿಧಿಯ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸಿ ದಿನಾಂಕ 12/07/2021ರಲ್ಲಿ ಹುಬ್ಬಳ್ಳಿ ವಲಯಕ್ಕೆ ವರ್ಗಾವಣೆಯಾಗಿ ಬಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?