ರಾಜ್ಯ

ಬೆಂಗಳೂರು: ಡಾ. ಶಿವರಾಮ ಕಾರಂತ್ ಬಡಾವಣೆಯಲ್ಲಿನ 300 ಕಟ್ಟಡ ಸಕ್ರಮಗೊಳಿಸಲು ಸುಪ್ರೀಂ ಕೋರ್ಟ್ ಅನುಮತಿ

Nagaraja AB

ಬೆಂಗಳೂರು: ಡಾ. ಶಿವರಾಮ್ ಕಾರಂತ್ ಬಡಾವಣೆಯಲ್ಲಿನ 300 ಕಟ್ಟಡಗಳನ್ನು ಸಕ್ರಮಗೊಳಿಸಲು ಹಾಗೂ ಅವುಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಲೇಔಟ್ ನೊಂದಿಗೆ ಸಂಯೋಜಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ 300 ಮನೆ ಮಾಲೀಕರಿಗೆ ದೊಡ್ಡ ನಿರಾಳ ಸಿಕ್ಕಂತಾಗಿದೆ. ಇದು ಸಕ್ರಮಗೊಳ್ಳುತ್ತಿರುವ ಮೊದಲ ಹಂತವಾಗಿದ್ದು, ಸಕ್ರಮ ಬಯಸುತ್ತಿರುವ 1,418 ಅರ್ಜಿದಾರರಲ್ಲೂ ವಿಶ್ವಾಸ ಮೂಡಿದೆ. 

 ಕೋರ್ಟ್ ನೇಮಿಸಿರುವ ನ್ಯಾಯಮೂರ್ತಿ ಎ. ವಿ. ಚಂದ್ರಶೇಖರ್  ನೇತೃತ್ವದ ಸಮಿತಿ ಇತ್ತೀಚಿಗೆ ಎರಡು ವರದಿಗಳನ್ನು ಸಲ್ಲಿಸಿದ ನಂತರ ನವೆಂಬರ್ 25 ಗುರುವಾರದಂದು  ಸುಪ್ರೀಂಕೋರ್ಟ್ ಈ ಆದೇಶ ನೀಡಿದೆ. ಬಿಡಿಎ, ಕರ್ನಾಟಕ ಸರ್ಕಾರ ಮತ್ತಿತರರ ನಡುವಿನ ಕೇಸ್ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರು ಈ ತೀರ್ಪು ನೀಡಿದ್ದಾರೆ. 

 ಕ್ರಮವಾಗಿ ನವೆಂಬರ್ 10 ಮತ್ತು ನವೆಂಬರ್ 23 ರಂದು ಸಮಿತಿ ನೀಡಿದ್ದ ಮೂರು ಮತ್ತು ನಾಲ್ಕನೇ ವರದಿ ಶಿಫಾರಸ್ಸಿನ ಆಧಾರದ ಮೇಲೆ ಈ ಆದೇಶ ನೀಡಿರುವುದಾಗಿ ಕೋರ್ಟ್ ಹೇಳಿದೆ.  ನವೆಂಬರ್ 26, 2014 ಮತ್ತು ಆಗಸ್ಟ್ 3, 2018 ರ ನಡುವೆ ಲೇಔಟ್‌ನಲ್ಲಿ ಆಗಿರುವ ನಿರ್ಮಾಣಗಳ ಕಾನೂನುಬದ್ಧತೆ ಉದ್ದೇಶದಿಂದ ನ್ಯಾಯಾಲಯವು ಸಮಿತಿಯನ್ನು ನೇಮಿಸಿತ್ತು.

SCROLL FOR NEXT