ಮೈಸೂರು ಅರಮನೆ-ಚಿನ್ನದ ಅಂಬಾರಿ 
ರಾಜ್ಯ

ಮೈಸೂರು ದಸರಾ: ಅರಮನೆಯಲ್ಲಿ ಜಗತ್ಪ್ರಸಿದ್ಧ ಚಿನ್ನದ ಸಿಂಹಾಸನ ಅಳವಡಿಕೆ

ಮೈಸೂರು ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ಸಕಲ ಆಚರಣೆಯೊಂದಿಗೆ ಬೆಲೆಬಾಳುವ ವಜ್ರಗಳಿಂದ ಕೂಡಿದ ಚಿನ್ನದ ಸಿಂಹಾಸನವನ್ನು ಅಳವಡಿಸಲಾಯಿತು.

ಮೈಸೂರು: ಮೈಸೂರು ಅರಮನೆಯ ದರ್ಬಾರ್‌ ಹಾಲ್‌ನಲ್ಲಿ ಶುಕ್ರವಾರ ಸಕಲ ಆಚರಣೆಯೊಂದಿಗೆ ಬೆಲೆಬಾಳುವ ವಜ್ರಗಳಿಂದ ಕೂಡಿದ ಚಿನ್ನದ ಸಿಂಹಾಸನವನ್ನು ಅಳವಡಿಸಲಾಯಿತು.

ಚಿನ್ನದ ಸಿಂಹಾಸನದ ಜೊತೆಗೆ, ಬೆಳ್ಳಿ ಭದ್ರಾಸನವನ್ನು ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಯಿತು. ಅಕ್ಟೋಬರ್ 7 ರಿಂದ ಆರಂಭವಾಗುವ ನವರಾತ್ರಿ ಆಚರಣೆಯಲ್ಲಿ ಇದು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಅ 7ರಿಂದ ಮೈಸೂರು ರಾಜಮನೆತನದ ಮುಖ್ಯಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಖಾಸಗಿ ದರ್ಬಾರ್ ಆರಂಭವಾಗಲಿದೆ.

ಮುಂಜಾನೆ ಅರಮನೆಯ ಗೌಪ್ಯ ಕೊಠಡಿಯಲ್ಲಿ ನವಗ್ರಹ ಹೋಮ, ಶಾಂತಿ ಹೋಮ ಮತ್ತು ಹವನಗಳು ನಡೆದವು. ನಂತರ ಸುವರ್ಣ ಸಿಂಹಾಸನವನ್ನು ಅಂಬಾ ವಿಲಾಸ ದರ್ಬಾರ್ ಹಾಲ್‌ಗೆ ತರಲಾಯಿತು. ಮತ್ತು ಸಿಂಹಾಸನವ ಹಾಗೂ ಭದ್ರಾಸನವನ್ನು ಬಿಗಿ ಪೊಲೀಸ್ ಭದ್ರತೆಯ ನಡುವೆ ಕನ್ನಡಿ ತೊಟ್ಟಿಯಲ್ಲಿ ಜೋಡಿಸಲಾಯಿತು.

ಈ ಆಚರಣೆಯ ಭಾಗವಾಗಿ, ಪಟ್ಟದ ಆನೆ (ಆನೆ), ಪಟ್ಟದ ಕುದುರೆ (ಕುದುರೆ) ಮತ್ತು ಪಟ್ಟದ ಹಾಸು (ಹಸು) ಎಲ್ಲವನ್ನೂ ರಾಜವಸ್ತ್ರಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಮೈಸೂರು ರಾಜಮನೆತನದ ಸದಸ್ಯರಾದ ಪ್ರಮೋದಾ ದೇವಿ ಒಡೆಯರ್, ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ಇತರರು ಇದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT