ರಾಜ್ಯ

ಮಂಗಳೂರು: ನೌಕರರ ಮೇಲೆ ತಂದೆ ಫೈರಿಂಗ್; ಪುತ್ರನಿಗೇ ತಗುಲಿದ ಗುಂಡು

Lingaraj Badiger

ಮಂಗಳೂರು: ತಂದೆಯೇ ಸ್ವಂತ ಮಗನ ಮೇಲೆ ಫೈರಿಂಗ್ ಮಾಡಿದ ಘಟನೆ ನಗರದ ಮಾರ್ಗನ್ಸ್ ಗೇಟ್ ಸಮೀಪ ಮಂಗಳವಾರ ನಡೆದಿದೆ.

ಗುಂಡಿನ ದಾಳಿಗೆ ಒಳಗಾದ ಬಾಲಕ ಸುಧೀಂದ್ರ ಪ್ರಭು (14) ಎಂದು ಗುರುತಿಸಲಾಗಿದೆ. ರಾಜೇಶ್ ಪ್ರಭು ಮಗನ ಮೇಲೆ ಗುಂಡು ಹಾರಿಸಿದ್ದಾರೆ.

ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರೊಬ್ಬರು ವೇತನ ಕೇಳಿ ಮಾಲೀಕ ರಾಜೇಶ್​ ಪ್ರಭು ಹತ್ತಿರಕ್ಕೆ ಬಂದಿದ್ದರು. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಅದು ತಾರಕ್ಕೇರಿದ ಪರಿಣಾಮ ರಾಜೇಶ್ ಸಿಟ್ಟಿನಿಂದ ಪಿಸ್ತೂಲ್ ತೆಗೆದು ಹೆದರಿಸಲು ಯತ್ನಿಸಿದ್ದಾರೆ. ಆದರೆ, ಅದು ಮಿಸ್​ ಫೈರ್​​ ಆಗಿ ಅವರ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ತಗುಲಿದೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿರುವ ಬಾಲಕನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

SCROLL FOR NEXT