ರಾಜ್ಯ

ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ: ಪುನೀತ್ ರಾಜ್ ಕುಮಾರ್ ವಿಡಿಯೊ ಹಂಚಿಕೊಂಡ ಸಚಿವ ಅಶ್ವತ್ಥ ನಾರಾಯಣ್

Manjula VN

ಬೆಂಗಳೂರು: ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್ ಅವರು ಶನಿವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, 'ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿರುವ ದೀಪ ಸಂಜೀವಿನಿ ಹಣತೆಗಳನ್ನು ಈ ದೀಪಾವಳಿಯಂದು ಬಳಸಲು ಕೋರುವಂತೆ ಪುನೀತ್‌ ಅವರು ಅಭಿಯಾನವೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

'ಮಹಿಳೆಯರ ಸ್ವಾವಲಂಬಿ ಹೆಜ್ಜೆಗಳನ್ನು ಬೆಂಬಲಿಸುವ ಉದ್ದೇಶದಿಂದ ನಮ್ಮೊಂದಿಗೆ ಸಹಕರಿಸಿದ ಪ್ರೀತಿಯ ಅಪ್ಪು ಅವರ ಆ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ' ಎಂದು ತಿಳಿಸಿದ್ದಾರೆ.

SCROLL FOR NEXT