ಸಾದರ್ಭಿಕ ಚಿತ್ರ 
ರಾಜ್ಯ

ಸೌದಿ ಅರೇಬಿಯಾದಿಂದ ಕರ್ನಾಟಕ ತಲುಪಿದ ಮೃತದೇಹ: ಸಂಬಂಧಿಕರಿಂದ ಕೊಲೆ ಆರೋಪ

ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಕರ್ನಾಟಕದ 34 ವರ್ಷದ ವ್ಯಕ್ತಿಯ ಮೃತದೇಹ ಮೂರು ವಾರಗಳ ನಂತರ ತವರು ಗ್ರಾಮಕ್ಕೆ ಆಗಮಿಸಿದೆ.

ವಿಜಯಪುರ: ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಕರ್ನಾಟಕದ 34 ವರ್ಷದ ವ್ಯಕ್ತಿಯ ಮೃತದೇಹ ಮೂರು ವಾರಗಳ ನಂತರ ತವರು ಗ್ರಾಮಕ್ಕೆ ಆಗಮಿಸಿದೆ.

ಸಿಂಧಗಿಯ ಮಾಲಗಾನ್ ಗ್ರಾಮದ ಬಸವರಾಜ ನವಿ ಸೌದಿ ಅರೇಬಿಯಾದ ಕೃಷಿ ಭೂಮಿಯಲ್ಲಿ ದಿನಗೂಲಿ ಕಾರ್ಮಿಕನಾಗಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದರು, ಆಗಸ್ಟ್ 12 ರಂದು ತಾನು ವಾಸಿಸುತ್ತಿದ್ದ ಕೊಠಡಿಯಲ್ಲಿ ಬಸವರಾಜ್ ನೇಣಿಗೆ ಶರಣಾಗಿದ್ದರ ಎಂದು ರಿಯಾದ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ವರದಿ ಮಾಡಿತ್ತು.

ಸೌದಿ ಅರೇಬಿಯಾದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಾಥಮಿಕ ತನಿಖೆ ಪೂರ್ಣಗೊಂಡ ನಂತರ ಮೃತದೇಹವನ್ನು ತವರಿಗೆ ಕಳುಹಿಸಲಾಗಿದೆ. ಬಸವರಾಜ್ ಮೂವರು ಮಕ್ಕಳು ಪತ್ನಿಯನ್ನು ಅಗಲಿದ್ದಾರೆ.

ನಮ್ಮ ಇಡೀ ಕುಟುಂಬ ಆಘಾತದಲ್ಲಿದೆ.ನನ್ನ ಸಹೋದರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ನಮಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಸವರಾಜ ಸಂಬಂಧಿ ಹನಮಂತ ನವಿ ಹೇಳಿದ್ದಾರೆ. 

ಆತನ ಅಂತ್ಯಕ್ರಿಯೆಗಾಗಿ ಶವಪೆಟ್ಟಿಗೆಯಿಂದ ಶವವನ್ನು ತೆರೆದಾಗ ಆತನ ದೇಹದಲ್ಲಿ ಹಲವಾರು ಗುರುತುಗಳು ಮತ್ತು ಗಾಯಗಳು ಕಂಡು ಬಂದಿದೆ. ಹೀಗಾಗಿ  ಇದು ಸಹಜ ಸಾವಿನ ಪ್ರಕರಣವಲ್ಲ, ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಬಸವರಾಜ್ ತನ್ನ ಪೋಷಕರು ಮತ್ತು ಪತ್ನಿ ಸೇರಿದಂತೆ ಕುಟುಂಬದ ಎಲ್ಲ ಸದಸ್ಯರೊಂದಿಗೆ ಸದಾ ಸಂಪರ್ಕದಲ್ಲಿದ್ದ. ಅವರು ಕುಟುಂಬದಲ್ಲಿ ಅಥವಾ ಸೌದಿ ಅರೇಬಿಯಾದಲ್ಲಿ  ಯಾವುದೇ ಹಣಕಾಸಿನ ಮತ್ತು ಯಾವುದೇ ಇತರ ಸಮಸ್ಯೆಗಳನ್ನು ಹೊಂದಿರಲಿಲ್ಲ.

ಸಾಯುವ ಮೂರು ದಿನ ಮುಂಚೆ ಕುಟುಂಬಸ್ಥರೊಂದಿಗೆ ಮಾತನಾಡಿದ್ದ. ಆಗಸ್ಟ್ 26 ರಂದು 1 ತಿಂಗಳು ರಜೆ ಮೇಲೆ ಊರಿಗೆ ಬರುವುದಾಗಿ ತಿಳಿಸಿದ್ದ. ಸರ್ಕಾರವು ನಮ್ಮ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರವನ್ನು ಪಡೆಯಲು ಸಹಾಯ ಮಾಡಬೇಕು ಏಕೆಂದರೆ ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಮಹಿಳೆಗೆ ಮೂರು ಮಕ್ಕಳನ್ನು ಬೆಳೆಸುವುದು ಕಷ್ಟವಾಗುತ್ತದೆ "ಎಂದು ಹನಮಂತ ನವಿ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT