ರಾಜ್ಯ

ಉಡುಪಿ: ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಹೆಚ್ಚಳ, ಆತಂಕದಲ್ಲಿ ಪೋಷಕರು

Manjula VN

ಉಡುಪಿ: ಕೊರೋನಾ 3ನೇ ಅಲೆ ಮಕ್ಕಳಿಗೆ ಮಾರಕವಾಗಲಿದೆ ಎನ್ನುವ ಆತಂಕದ ನಡುವೆ ಜಿಲ್ಲೆಯಲ್ಲಿ ಜ್ವರದ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಗೆ ದಾಖಲಾಗುವ ಶೇ.80ರಷ್ಟು ಮಕ್ಕಳಲ್ಲಿ ಶ್ವಾಸಕೋಶದ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸುತ್ತಿದೆ.

ಜಿಲ್ಲೆಯ ಕಸ್ತೂರ್ ಬಾ ಆಸ್ಪತ್ರೆ, ಮಣಿಪಾಲ್ ಹಾಗೂ ಮಕ್ಕಳ ಇತರೆ ಆಸ್ಪತ್ರೆಗಳಲ್ಲಿ ಪ್ರತೀ ವಾರ 4-5 ಮಕ್ಕಳು ಆರ್‌ಎಸ್‌ವಿ ಸೋಂಕಿನಿಂದ ದಾಖಲಾಗುತ್ತಿದ್ದಾರೆಂದು ತಿಳಿದುಬಂದಿದೆ. 

ಈ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಕಸ್ತೂರ್ಬಾ ಆಸ್ಪತ್ರೆಯ ಪೀಡಿಯಾಟ್ರಿಕ್ಸ್ ವಿಭಾಗದ ಮುಖ್ಯಸ್ಥ, ಡಾ ಲೆಸ್ಲಿ ಎಡ್ವರ್ಡ್ ಎಸ್ ಲೂಯಿಸ್ ಅವರು, ಕಸ್ತೂರ್ ಬಾ ಆಸ್ಪತ್ರೆ, ಮಣಿಪಾಲ ಹಾಗೂ ಮಕ್ಕಳ ಆಸ್ಪತ್ರೆಗಳಲ್ಲಿ ಪ್ರತೀ ವಾರ ಆರ್‌ಎಸ್‌ವಿ ಸೋಂಕಿನಿಂದ 4-5 ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರೊಂಕೋಡಿಲೇಟರ್ ಔಷಧವನ್ನು ನೀಡಲಾಗುತ್ತಿದೆ, ಆದರೆ, ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.  

ಆರ್‌ಎಸ್‌ವಿಯಿಂದ ಪ್ರಾಣಾಪಾಯ ಎದುರಾಗುವಂತಹ ದೊಡ್ಡ ಸಮಸ್ಯೆಗಳೇನೂ ಎದುರಾಗುವುದಿಲ್ಲ. ಶೀತ, ಕೆಮ್ಮು ಜ್ವರ ಕಾಣಿಸಿಕೊಳ್ಳುತ್ತದೆ. 1 ವರ್ಷದ ಮಕ್ಕಳಲ್ಲಿ ಇದರಿಂದ ಶ್ವಾಸಕೋಶ ಸೋಂಕು ಎದುರಾಗಬಹುದು ಎಂದು ತಿಳಿಸಿದ್ದಾರೆ. 

ಪ್ರಸ್ತುತ ಸೋಂಕಿನಿಂದ ಬಳಲುತ್ತಿರುವ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ. ಸಾಕಷ್ಟು ಮಕ್ಕಳಿದೆ ಹೊರ ರೋಗಿ ವಿಭಾಗದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸುವ ಪರಿಸ್ಥಿತಿ ಎದೆ. ಈವರೆಗೂ ಈ ಸೋಂಕಿನಿಂದ ಯಾವುದೇ ಸಾವುಗಳೂ ಸಂಭವಿಸಿಲ್ಲ. ಇದು ಸೀಸನಲ್ ಸೋಂಕಾಗಿದ್ದು, ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಕಣ್ಗಾವಲು ಅಧಿಕಾರಿಯಾಗಿರುವ ಡಾ.ನಾಗರತ್ನ ಅವರು ಹೇಳಿದ್ದಾರೆ.

SCROLL FOR NEXT