ಸಾಂದರ್ಭಿಕ ಚಿತ್ರ 
ರಾಜ್ಯ

ಮಡಿಕೇರಿ: ವಾಸಿಸಲು ಮನೆ ಸಿಗುತ್ತಿಲ್ಲ, ದಯಾ ಮರಣ ಕರುಣಿಸಿ; ಜಿಲ್ಲಾಧಿಕಾರಿಗೆ ತೃತೀಯಲಿಂಗಿ ಮನವಿ

ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ

ಮಡಿಕೇರಿ: ಬಾಡಿಗೆ ಮನೆ ಪಡೆಯಲು ಸಾಧ್ಯವಾಗದೆ ತೃತೀಯಲಿಂಗಿಯೊಬ್ಬರು ದಯಾಮರಣಕ್ಕೆ ಮನವಿ ಮಾಡಿಕೊಂಡಿದ್ದಾರೆ. ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ನನ್ನ ಮನವಿಗೆ ಪ್ರತಿಕ್ರಿಯಿಸಲು ಡಿಸಿ ವಿಫಲರಾಗಿದ್ದಾರೆ ಎಂದು ರಿಹಾನಾ ತಮ್ಮ ಅಳಲು ತೋಡಿಕೊಂಡಿದ್ದಾರೆ.  

‘ನಾನು ಡಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ನಾನು ತೃತೀಯಲಿಂಗಿಯಾಗಿ ಹುಟ್ಟಿದ್ದು ತಪ್ಪೇ? ನನಗೆ ಬದುಕುವ ಹಕ್ಕಿಲ್ಲವೇ..? ಜನರಲ್ಲಿ ಮಾನವೀಯ ಮೌಲ್ಯಗಳಿವೆಯೇ? ನಾವು ಭಾರತೀಯ ಪ್ರಜೆಗಳಲ್ಲವೇ? ಎಂದು ರಿಹಾನಾ ಪ್ರಶ್ನಿಸಿದ್ದಾರೆ.

‘ನಾನು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದೇನೆ. ಆದರೆ, ನಮಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡುತ್ತಿಲ್ಲ. ಡಿಸಿ ಕೂಡ ನಮಗೆ ಸಹಾಯ ಮಾಡಲು ವಿಫಲರಾಗಿದ್ದಾರೆ. ನನಗೆ ಉಚಿತ ಮನೆ ಬೇಡ, ಬಾಡಿಗೆ ನೀಡಲು ನಾನು ಸಿದ್ಧ. ಹೇಗಾದರೂ ಮಾಡಿ ನನಗೆ ಬಾಡಿಗೆ ಮನೆ ಕೊಡಿಸಿ, ಇಲ್ಲವೆ ದಯಾಮರಣ ಕೊಡಿಸಿ ಎಂದು ರಿಹಾನಾ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ.   

ದಶಕದ ಹಿಂದೆ ರಿಹಾನಾ ಕೇರಳದಿಂದ ಮಡಿಕೇರಿಗೆ ತೆರಳಿದ್ದರು. ಇತರ ವಿದ್ಯಾರ್ಥಿಗಳ ಕಿರುಕುಳದಿಂದ ಆಕೆ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು. "ನಾನು ಟ್ರಾನ್ಸ್‌ವುಮನ್ ಆಗಿದ್ದಕ್ಕಾಗಿ ಕಿರುಕುಳಕ್ಕೊಳಗಾಗಿದ್ದರಿಂದ ನಾನು ನನ್ನ ಅಧ್ಯಯನವನ್ನು ತ್ಯಜಿಸಲು ನಿರ್ಧರಿಸಿದೆ. ನಾನು ಮೈಸೂರಿನಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸೇರಿಕೊಂಡೆ ಮತ್ತು ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನಾನು ಮೈಸೂರು ಮತ್ತು ಬೆಂಗಳೂರಿಗೆ ಓಡಾಡುತ್ತಿದ್ದೆ,  ಮತ್ತೆ ಮಡಿಕೇರಿಗೆ ತೆರಳಲು ನಿರ್ಧರಿಸಿದೆ.

ಸುದೀರ್ಘ ಹುಡುಕಾಟದ ನಂತರ, ನಾನು ಬಾಡಿಗೆಗೆ ಮನೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದೇನೆ, ಆದರೆ ನೆರೆಹೊರೆಯವರು ಮಾಲೀಕನ ಮೇಲೆ ಒತ್ತಡ ಹೇರಿದರು ಮತ್ತು ನನ್ನನ್ನು ಹೊರಹಾಕಿದರು, ನಂತರ ಮಡಿಕೇರಿಯಲ್ಲಿ ಪ್ರವಾಹ ಸಂತ್ರಸ್ತರೊಬ್ಬರಿಂದ ಸಹಾಯ ಪಡೆದರು, ಅವರು ಭೂಕುಸಿತದಿಂದ ಹಾನಿಗೊಳಗಾದ ಮನೆಯಲ್ಲಿ ಆಶ್ರಯ ನೀಡಲು ಒಪ್ಪಿಕೊಂಡರು. ಪ್ರವಾಹ ಪರಿಹಾರ ಕಾರ್ಯದಡಿ ಕುಟುಂಬಕ್ಕೆ ಮನೆ ಮಂಜೂರಾಗಿದ್ದು, ಅವರು ತಮ್ಮ ಹಳೆಯ ಮನೆಯಲ್ಲಿಯೇ ಇರುವಂತೆ ಹೇಳಿದರು. ಆದರೆ, ಮನೆ ಈಗ ಶಿಥಿಲಾವಸ್ಥೆಯಲ್ಲಿದೆ' ಹೀಗಾಗಿ ನನಗೆಅಲ್ಲಿ ವಾಸಿಸಲು ಆಗುತ್ತಿಲ್ಲ ಎಂದು ತಮ್ಮನೋವು ತೋಡಿಕೊಂಡಿದ್ದಾರೆ.  ಸರ್ಕಾರಿ ವಸತಿ ಯೋಜನೆಯಡಿ ಮನೆಗಾಗಿ ರಿಹಾನಾ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಮಡಿಕೇರಿಯ ಜಿಲ್ಲಾಧಿಕಾರಿ (ಡಿಸಿ) ಕಚೇರಿಗೆ ತಾನು ಹಲವಾರು ಬಾರಿ ಭೇಟಿ ನೀಡಿ ಅರ್ಜಿಗಳನ್ನು ನೀಡಿದರೂ ನಿರ್ಲಕ್ಷಿಸಲಾಗಿದೆ ಎಂದು ರಿಹಾನಾ ಹೇಳಿದರು.  ಸದ್ಯ ಒಂದು ತಿಂಗಳಿನಿಂದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದು ದಿನಕ್ಕೆ 400 ರೂ ಪಾವತಿಸಬೇಕಾಗಿದೆ. ಕೊನೆಯ ಪ್ರಯತ್ನವಾಗಿ, ನನಗೆ ದಯಾ ಮರಣ ನೀಡಲು ಅನುಮತಿ ನೀಡುವಂತೆ ಅರ್ಜಿಯೊಂದಿಗೆ ಡಿಸಿಯನ್ನು ಭೇಟಿ ಮಾಡಲು ಹೋಗಿದ್ದಾಗಿ ತಿಳಿಸಿದ್ದಾರೆ.

ನಾನು ಬದುಕಲು ಬಯಸುತ್ತೇನೆ, ಆದರೆ ನಾನು ಬದುಕುವುದು ಹೇಗೆ? . ಜಿಲ್ಲೆಯಲ್ಲಿ ಕೇವಲ ನಾಲ್ವರು ಟ್ರಾನ್ಸ್‌ವುಮೆನ್‌ಗಳಿದ್ದು, ಅವರು ಜೀವನೋಪಾಯಕ್ಕಾಗಿ ಭಿಕ್ಷೆಯನ್ನು ಅವಲಂಬಿಸಿದ್ದಾರೆ ಎಂದು ರಿಹಾನಾ ಹೇಳಿದ್ದಾರೆ. “ಉದ್ಯೋಗ ಹೊಂದುವುದು ನನ್ನ ಕನಸು. ಆದರೆ ನಮಗೆ ಯಾವುದು ಸಿಗುತ್ತಿಲ್ಲ. ಆಡಳಿತವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನನಗೆ ಮನೆ ನೀಡುವುದು, ಅದನ್ನಾದರೂ ನೀಡಲಿ  ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT