ರಾಜ್ಯ

ತುಮಕೂರು: ಮೂರು ವರ್ಷದ ಬಾಲಕನ ಮರ್ಮಾಂಗ ಸುಟ್ಟ ಅಂಗನವಾಡಿ ಶಿಕ್ಷಕಿ!

Nagaraja AB

ತುಮಕೂರು: ವಿಲಕ್ಷಣಕಾರಿ ಘಟನೆಯೊಂದರಲ್ಲಿ ಆಗಾಗ್ಗೆ ಪ್ಯಾಂಟ್  ಒದೆ ಮಾಡಿಕೊಳ್ಳುತ್ತಿದ್ದ ಮೂರು ವರ್ಷದ ಬಾಲಕನ ಮರ್ಮಾಂಗವನ್ನು ಅಂಗನವಾಡಿ ಶಿಕ್ಷಕಿಯೊಬ್ಬರು ಸುಟ್ಟಿರುವ ಘಟನೆ ನಡೆದಿದೆ. 28 ವರ್ಷದ ಸಹಾಯಕ ಶಿಕ್ಷಕಿ ರಶ್ಮಿ ಬೆಂಕಿ ಕಡ್ಡಿ ಹೊತ್ತಿಸಿ ಅಪ್ರಾಪ್ತ ಬಾಲಕನ ಖಾಸಗಿ ಅಂಗವನ್ನು ಸುಟ್ಟಿರುವುದಾಗಿ ವರದಿಯಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಗೊಡೆಕೆರೆಯ ಅಂಗನವಾಡಿ ಕೇಂದ್ರವೊಂದರಲ್ಲಿ ವಾರದ ಹಿಂದೆ ಈ ಘಟನೆ ನಡೆದಿದ್ದು ಸೋಮವಾರ ಬಾಲಕನ ಅಜ್ಜಿ ಸ್ನಾನ ಮಾಡಿಸುತ್ತಿರುವಾಗ ಘಟನೆ ಬೆಳಕಿಗೆ ಬಂದಿದೆ.

ಬಾಲಕನ ಜನನಾಂಗದ ಮೇಲೆ ಸುಟ್ಟ ಗಾಯವಾಗಿರುವುದನ್ನು ಅಜ್ಜಿ ಗಮನಿಸಿದ್ದಾರೆ. ನಂತರ ಬಾಲಕನ ಕುಟುಂಬದವರು ಈ ವಿಷಯವನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಪವಿತ್ರಾ ಅವರ ಗಮನಕ್ಕೆ ತಂದಿದ್ದಾರೆ. 

ಈ ಬಾಲಕನಿಗೆ  6 ನೇ ತರಗತಿಯಲ್ಲಿ ಓದುತ್ತಿರುವ ಹಿರಿಯ ಸಹೋದರನಿದ್ದಾನೆ. ಮಗುವಿನ ಪೋಷಕರು ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ನಲ್ಲಿ ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಮತ್ತು ಬಾಲಕನ ತಾಯಿಯ ಮರಣದ ನಂತರ ಗೋಡೆಕೆರೆಗೆ ತೆರಳಿದರು. ಬಾಲಕ ಆಗಾಗ್ಗೆ ತನ್ನ ಪ್ಯಾಂಟ್  ಒದ್ದೆ ಮಾಡಿಕೊಳ್ಳುತ್ತಿದ್ದ. ಇದು ಚಿಕ್ಕ ಮಕ್ಕಳಲ್ಲಿ, ವಿಶೇಷವಾಗಿ ಚಿಕ್ಕವರಾಗಿದ್ದಾಗ ಪೋಷಕರನ್ನು ಕಳೆದುಕೊಂಡು ಆಘಾತಕ್ಕೊಳಗಾದವರಲ್ಲಿ ತುಂಬಾ ಸಾಮಾನ್ಯವಾಗಿದೆ.

ಆದಾಗ್ಯೂ, ಆರೋಪಿ ರಶ್ಮಿ ವಿರುದ್ಧ ಯಾವುದೇ ಪೊಲೀಸ್ ಪ್ರಕರಣ ದಾಖಲಾಗಿಲ್ಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ್ ಎಂ.ಎಸ್ ಮಾತನಾಡಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಅವರನ್ನು ಶಿಕ್ಷಕಿಯನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿರುವುದಾಗಿ ತಿಳಿಸಿದರು. 

SCROLL FOR NEXT