ರಾಜ್ಯ

ವಿಜಯಪುರದಲ್ಲಿ ಕಾರಿಗೆ ಅಪರಿಚಿತ ವಾಹನ ಡಿಕ್ಕಿ: ಇಬ್ಬರ ದುರ್ಮರಣ

Vishwanath S

ವಿಜಯಪುರ: ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಸಿಂದಗಿ ತಾಲೂಕಿನ ಹಂಚಿನಾಳ ಕ್ರಾಸ್ ಬಳಿ ನಡೆದಿದೆ. 

ಮೃತರನ್ನು ಗೋಕಾಕ ಮೂಲದ 34 ವರ್ಷದ ನಾಗರಾಜ ಯಡವಣ್ಣವರ ಹಾಗೂ 33 ವರ್ಷದ ಸಂಜು ಹಿತಾರಗೌಡರ ಎಂದು ತಿಳಿದುಬಂದಿದೆ. 

ಇನ್ನು ಅಪಘಾತದಲ್ಲಿ 24 ವರ್ಷದ ಆಶಿಫ್ ಮುಲ್ಲಾ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

SCROLL FOR NEXT