ಮಡಿಕೇರಿಯಲ್ಲಿ ಪುತ್ತರಿ ಹಬ್ಬ ಆಚರಿಸಿದ ಮುಸ್ಲಿಮ್ ಕುಟುಂಬ 
ರಾಜ್ಯ

ಕೊಡಗಿನಲ್ಲೊಂದು ಕೋಮು ಸೌಹಾರ್ದತೆಯ ಕಥೆ: ಪುತ್ತರಿಯ ಸುಗ್ಗಿಯ ಹಬ್ಬ ಆಚರಿಸಿದ ಮುಸ್ಲಿಮ್ ಕುಟುಂಬ

ಮಡಿಕೇರಿಯ ಎಮ್ಮೆಮಡು ಗ್ರಾಮದಲ್ಲೊಂದು ಕೋಮು ಸೌಹಾರ್ದತೆಯ ನಡೆ ಕಂಡುಬಂದಿದ್ದು, ತಮ್ಮ ಹಿಂದಿನ ಪೀಳಿಗೆಯೊಂದಿಗೆ ಬೆಸೆದುಕೊಂಡಿರುವ ನಂಟಿನ ಕಥೆ ಹೇಳುತ್ತಿದೆ. 

ಮಡಿಕೇರಿ: ಮಡಿಕೇರಿಯ ಎಮ್ಮೆಮಡು ಗ್ರಾಮದಲ್ಲೊಂದು ಕೋಮು ಸೌಹಾರ್ದತೆಯ ನಡೆ ಕಂಡುಬಂದಿದ್ದು, ತಮ್ಮ ಹಿಂದಿನ ಪೀಳಿಗೆಯೊಂದಿಗೆ ಬೆಸೆದುಕೊಂಡಿರುವ ನಂಟಿನ ಕಥೆ ಹೇಳುತ್ತಿದೆ. 

ಎಮ್ಮೆಮಡು ಗ್ರಾಮದ ಮುಸ್ಲಿಮರು ಹಾಗೂ ಕೊಡವ ಸಮುದಾಯದವರು ಒಟ್ಟಿಗೆ ಪುತ್ತರಿಯ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. 

ಕಾಲೀರಾ ಮುಸ್ಲಿಮ್ ಕುಟುಂಬ ಇತ್ತೀಚೆಗಷ್ಟೇ ಪುತ್ತರಿ ಹಬ್ಬವನ್ನು ಸಂಪ್ರದಾಯದ ಪ್ರಕಾರ ಆಚರಣೆ ಮಾಡಿದೆ. ಮೊದಲ ಭತ್ತದ ಕೊಯ್ಲನ್ನು ಮನೆಗೆ ತಂದು ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. ಮನೆಯಲ್ಲಿ ಸಾವು ಸಂಭವಿಸಿದ್ದರ ಪರಿಣಾಮ ಪುತ್ತರಿಯನ್ನು ಅದೇ ದಿನ ಆಚರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ 7 ದಿನಗಳ ನಂತರ ಹಬ್ಬ ಆಚರಣೆ ಮಾಡಿದೆವು ಎಂದು ಕಲೀರಾ ಖಾದರ್ ಹೇಳಿದ್ದಾರೆ. 

ಪುರಾತನ ಕಾಲದಿಂದಲೂ ನಮ್ಮ ಕುಟುಂಬದ ಪೂರ್ವಜರು ಪುತ್ತರಿಯನ್ನು ಆಚರಣೆ ಮಾಡುತ್ತಿದ್ದರು. ಗ್ರಾಮದಲ್ಲಿ ಕೊಡವ ಸಮುದಾಯದೊಂದಿಗೆ ಮುಸ್ಲಿಮ್ ಸಮುದಾಯ ವಿಶೇಷ ನಂಟಿ ಹೊಂದಿದ್ದು,  ಈ ಹಿಂದೆ ಎರಡೂ ಸಮುದಾಯಗಳು ಒಟ್ಟಿಗೆ ಪುತ್ತರಿ ಆಚರಿಸುತ್ತಿದ್ದವು. ಆದರೆ ಕಾರಣಾಂತರಗಳಿಂದ ಇದು ಈಗ ಸ್ಥಗಿತಗೊಂಡಿದೆ. ಆದರೆ ಪ್ರತ್ಯೇಕವಾಗಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT