ದೇವಾಲಯದ ನಿವೇಶನದಲ್ಲಿ ಕೇಂದ್ರ ಉಪಾಧ್ಯಾಯರ ಸಂಘದ ಬೋರ್ಡ್ 
ರಾಜ್ಯ

ಬೆಂಗಳೂರು: ವಿವಾದಕ್ಕೆ ಸಿಲುಕಿದೆ ಬನಶಂಕರಿ ದೇವಾಲಯದ ನಿವೇಶನ

ಬನಶಂಕರಿ ದೇವಸ್ಥಾನದ ಸ್ಥಳವು ದೇವಸ್ಥಾನ ಸಮಿತಿ ಮತ್ತು ಕೇಂದ್ರ ಉಪಾಧ್ಯಾಯರ ಸಂಘಗಳ ನಡುವೆ ವಿವಾದದ ಬಿಂದುವಾಗಿ ಮಾರ್ಪಟ್ಟಿದೆ. ಏಕೆಂದರೆ ಇಬ್ಬರೂ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ.

ಬೆಂಗಳೂರು: ಬನಶಂಕರಿ ದೇವಸ್ಥಾನದ ಸ್ಥಳವು ದೇವಸ್ಥಾನ ಸಮಿತಿ ಮತ್ತು ಕೇಂದ್ರ ಉಪಾಧ್ಯಾಯರ ಸಂಘಗಳ ನಡುವೆ ವಿವಾದದ ಬಿಂದುವಾಗಿ ಮಾರ್ಪಟ್ಟಿದೆ. ಏಕೆಂದರೆ ಇಬ್ಬರೂ ಆಸ್ತಿಯ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನದ ಜಾಗದಲ್ಲಿ ಅತಿಕ್ರಮ ಪ್ರವೇಶ ಯತ್ನ ನಡೆದಿದೆ ಎಂದು ದೇವಸ್ಥಾನ ಸಮಿತಿ ಆರೋಪಿಸಿದೆ. ಸಂಘದವರು ಬೋರ್ಡ್ ಕೂಡ ಹಾಕಿದ್ದು, ಭಾನುವಾರ ತೆಗೆದಿದ್ದಾರೆ. ಸಂಘವು 1984 ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ 2,31,250 ರೂ ಪಾವತಿಸಿದೆ ಎಂದು ಹೇಳಿದ್ದಾರೆ.

63/2 ಮತ್ತು 63/3 ರ ಎರಡು ವಿಭಿನ್ನ ಸರ್ವೆ ಸಂಖ್ಯೆಗಳಲ್ಲಿ 3 ಎಕರೆ 26 ಗುಂಟೆ ಹೊಂದಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಪದ್ಮಾ ಕೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಕಂಪೌಂಡ್ ವಾಲ್ ಹಾಕಲು ಇಲಾಖೆ ನಿರ್ಧರಿಸಿದಾಗ ಆ ಜಾಗದ ಒಂದು ಭಾಗ ಸಂಘಕ್ಕೆ ಸೇರಿದ್ದು ಎಂಬ ಬೋರ್ಡ್ ಬಂದಿತ್ತು.

ಬೋರ್ಡ್ ತೆಗೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾಲೀಕತ್ವವನ್ನು ಪರಿಶೀಲಿಸಲು ನಮಗೆ ದಾಖಲೆಗಳನ್ನು ನೀಡುವಂತೆ ನಾವು ಬಿಡಿಎಗೆ ಪತ್ರ ಬರೆದಿದ್ದೇವೆ. 1984ರಲ್ಲಿ ನಿವೇಶನ ಮಂಜೂರಾಗಿದೆ ಎಂದು ಸಂಘ ಹೇಳಿಕೊಳ್ಳುತ್ತಿದ್ದು, ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಬನಶಂಕರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎ.ಎಚ್.ಬಸವರಾಜು ಮಾತನಾಡಿ, ದೇವಸ್ಥಾನಕ್ಕೆ ಸೇರಿದ ಒಂದು ಇಂಚು ಜಾಗ ನೀಡುವುದಿಲ್ಲ. "ಸಂಕೀರ್ಣ ಮತ್ತು ಸಮುದಾಯ ಭವನ ನಿರ್ಮಿಸಲು ವಿವರವಾದ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ.  ಕಾಲ್ಪನಿಕ ಹಕ್ಕುಗಳನ್ನು ಮುಂದಿಟ್ಟುಕೊಂಡು ಸಂಘ ಭೂಮಿಯನ್ನು ಕಬಳಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಆರೋಪವನ್ನು ನಿರಾಕರಿಸಿದ ಸಂಘದ ಅಧ್ಯಕ್ಷ ನಂಜೇಶ್ ಗೌಡ, ಸಂಘವು ಸರ್ಕಾರದಿಂದ ಭೂಮಿಯನ್ನು ಪಡೆದುಕೊಂಡಿದೆ ಮತ್ತು ಅದರ ಬಳಿ ಎಲ್ಲಾ ದಾಖಲೆಗಳಿವೆ. ಪಹಣಿಯ 11 ನೇ ಕಾಲಂನಲ್ಲಿಯೂ ಸಹ, ಭೂಮಿಯ ಮೇಲಿನ ಹಕ್ಕು ಸಂಘಕ್ಕೆ ಇದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಹೇಳಿದ್ದಾರೆ.

ನವೆಂಬರ್ 29 ರಂದು, ಸೈಟ್‌ನಲ್ಲಿನ ನಮ್ಮ ಬೋರ್ಡ್ ಹಾನಿಗೊಳಗಾದ ನಂತರ, ನಾವು ಪೊಲೀಸ್ ದೂರು ದಾಖಲಿಸಿದ್ದೇವೆ. ಇದು ಸಿವಿಲ್ ವಿಚಾರವಾಗಿರುವುದರಿಂದ ನ್ಯಾಯಾಲಯದಲ್ಲಿಯೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

Udaipur: ನಿಜಕ್ಕೂ ಅಚ್ಚರಿ, 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ತಾಯಿಯಾದ ಮಹಿಳೆ!

SCROLL FOR NEXT