ಪೊಲೀಸ್ (ಸಾಂಕೇತಿಕ ಚಿತ್ರ) 
ರಾಜ್ಯ

ಕರ್ನಾಟಕದಲ್ಲಿ ಐಪಿಎಸ್ ವಿಭಾಗದಲ್ಲಿ ಮೇಜರ್ ಸರ್ಜರಿ ಸಾಧ್ಯತೆ 

ಕರ್ನಾಟಕ ಪೊಲೀಸ್ ಇಲಾಖೆಗೆ ಈ ವಾರ ಪ್ರಮುಖ ಸರ್ಜರಿ ನಡೆಯುವ ಸಾಧ್ಯತೆ ಇದ್ದು, ಹಾಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪಡೆಯಲಿದ್ದಾರೆ.

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಗೆ ಈ ವಾರ ಪ್ರಮುಖ ಸರ್ಜರಿ ನಡೆಯುವ ಸಾಧ್ಯತೆ ಇದ್ದು, ಹಾಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪಡೆಯಲಿದ್ದಾರೆ.

ಎಡಿಜಿಪಿ ಪ್ರತಾಪ್ ರೆಡ್ಡಿ ಡಿಜಿಪಿ ಹುದ್ದೆಗೆ ಬಡ್ತಿ ದೊರೆಯಲಿದ್ದು,  ಡಿಜಿಪಿ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ , ಗೃಹರಕ್ಷಕರು, ನಾಗರಿಕ ರಕ್ಷಣಾ ಹಾಗೂ ಎಸ್ ಡಿಆರ್ ಎಫ್ ನ ಮುಖ್ಯಸ್ಥರಾಗಿರುವ ಅಮರ್ ಕುಮಾರ್ ಪಾಂಡೇ ನಿವೃತ್ತಿಪಡೆಯಲಿದ್ದಾರೆ. 

ನಗರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದ್ದು, ಹೋಮ್ ಗಾರ್ಡ್ಸ್, ಸಿವಿಲ್ ಡಿಫೆನ್ಸ್ ಹಾಗೂ ಎಸ್ ಡಿಆರ್ ಎಫ್ ಗೆ ಮತ್ತೋರ್ವ ಡಿಜಿಪಿಯನ್ನು ನೇಮಕ ಮಾಡಲಾಗುತ್ತದೆ. 

1998 ರ ಬ್ಯಾಚ್ ನ ಐಪಿಎಸ್ ಅಧಿಕಾರಿಗಳಾಗಿರುವ ಐವರು ಐಜಿಪಿ-ಸೌಮೇಂದು ಮುಖರ್ಜಿ (ಗುಪ್ತಚರ) ಚಂದ್ರಶೇಖರ್ ( ಸೆಂಟ್ರಲ್ ರೇಂಜ್) ಎಸ್ ರವಿ (ಪಿಸಿಎಎಸ್, ಗೃಹ, ಸರ್ಕಾರದ ಕಾರ್ಯದರ್ಶಿ) ಮನೀಷ್ ಖರ್ಬಿಕರ್ (ಕಲಬುರಗಿ ರೇಂಜ್) ಹಾಗೂ ಪಂಕಜ್ ಠಾಕೂರ್ ಅವರಿಗೆ ಎಡಿಜಿಪಿ ಹುದ್ದೆಗೆ ಪದೋನ್ನತಿ ದೊರೆಯಲಿದೆ.
 
2005 ಬ್ಯಾಚ್ ನ ಐಪಿಎಸ್ ಅಧಿಕಾರಿಗಳು ಹಾಗೂ ಡೆಪ್ಯುಟಿ ಇನ್ಸ್ಪೆಕ್ಟರ್ ಜನರ (ಡಿಐಜಿ) ರವಿಕಾಂತೇಗೌಡ (ಸಿಐಡಿ), ರಮಣ್ ಗುಪ್ತ (ಗುಪ್ತಚರ ವಿಭಾಗದ ಜಂಟಿ ಆಯುಕ್ತ) ಆರ್ ದಿಲೀಪ್, ಸಿದ್ದರಾಮಪ್ಪ (ಸಾರಿಗೆ ಆಯುಕ್ತ) ಬಾಲಕೃಷ್ಣ (ಹೋಮ್ ಗಾರ್ಡ್ಸ್) ಬಿಎಸ್ ಲೋಕೇಶ್ ಕುಮಾರ್ (ಬಳ್ಳಾರಿ ರೇಂಜ್), ಕೌಶಲೇಂದ್ರ ಕುಮಾರ್ (ಕೇಂದ್ರ ಪ್ರತಿನಿಧಿ, ಐಬಿ) ಹಾಗೂ ಅಭಿಷೇಕ್ ಗೋಯಲ್ (ಜಾರಿ ನಿರ್ದೇಶನಾಲಯ) ಅವರುಗಳಿಗೆ ಐಜಿಪಿ ಶ್ರೇಣಿಗೆ ಬಡ್ತಿ ನೀಡಲಾಗುತ್ತದೆ. 

2009 ರ ಬ್ಯಾಚ್ ನ ಐಪಿಎಸ್ ಅಧಿಕಾರಿಗಳಾದ ಎಂಎನ್ ಅನುಚೇತ್, ಶರಣಪ್ಪ, ರವಿ ಚನ್ನಣ್ಣನವರ್, ಬಿ ರಮೇಶ್, ಶಂತನು ಸಿನ್ಹಾ, ವಂಶಿ ಕೃಷ್ಣ, ಅಭಿನವ ಖರೆ, ಲದಾ ಮಾರ್ಟೀನ್, ಭೂಷಣ್ ಬೋರ್ಸೆ ಅವರುಗಳಿಗೆ ಡಿಐಜಿಪಿ ಶ್ರೇಣಿಗೆ ಬಡ್ತಿ ನೀಡಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯಾರತ್ರ ಮಾತನಾಡಬೇಕೋ ಅಲ್ಲಿ ಮಾತನಾಡುತ್ತೇನೆ: ಯತೀಂದ್ರಗೆ ಡಿಕೆ ಶಿವಕುಮಾರ್ ತಿರುಗೇಟು

ಚಿತ್ತಾಪುರದಲ್ಲಿ ಪಥ ಸಂಚಲನ: ಶಾಂತಿ ಸಭೆ ನಡೆಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ; RSSಗೆ ನಿರಾಸೆ

ಎಲ್ಲರ ವಾಟ್ಸಾಪ್ ಗುಂಪುಗಳ ಮೇಲೆ ನಿಗಾ: ಬಿಜೆಪಿ ನಾಯಕನ ಹೇಳಿಕೆಗೆ ವಿಪಕ್ಷ ನಾಯಕರು ಕೆಂಡ!

ರಷ್ಯನ್ ತೈಲ: ಆರ್ಥಿಕ ಅವಶ್ಯಕತೆ ಮತ್ತು ಅಮೆರಿಕದ ಒತ್ತಡಗಳ ನಡುವೆ ಸಿಲುಕಿದ ಭಾರತ, ಚೀನಾ

ಮಹಾರಾಷ್ಟ್ರ: ಇಬ್ಬರು ಪೊಲೀಸ್ ಅಧಿಕಾರಿಗಳಿಂದ ಅತ್ಯಾಚಾರ, ಕಿರುಕುಳ; ವೈದ್ಯೆ ಆತ್ಮಹತ್ಯೆ!

SCROLL FOR NEXT