ಬೆಳಗಾವಿ: ಇಂದು ಗುರುವಾರ ಡಿಸೆಂಬರ್ 29ರಂದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಲಾಯಿತು.
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಸಮ್ಮುಖದಲ್ಲಿ ಸಾವರ್ಕರ್ ಭಾವಚಿತ್ರ ಅಳವಡಿಸಿ ಅದಕ್ಕೆ ಪುಷ್ಪನಮನ ಸಲ್ಲಿಸಿ ಗೌರವಿಸಲಾಯಿತು.
1950 ರ ಏಪ್ರಿಲ್ 4 ರಿಂದ ಜುಲೈ 13 ರವರೆಗೆ 99 ದಿನಗಳ ಕಾಲ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಅವರನ್ನು ಕೈದಿಯಾಗಿ ಬಂಧನದಲ್ಲಿರಿಸಲಾಗಿತ್ತು. ಈ ಕಾರಣದಿಂದ ಹಿಂದೂವಾದಿ, ಸಮಾಜಸುಧಾರಕ ಸಾವರ್ಕರ್ ಫೋಟೋವನ್ನು ಜೈಲಿನೊಳಗೆ ಅಳವಡಿಸಬೇಕೆಂಬ ಒತ್ತಾಯ ಕೇಳಿಬರುತ್ತಿತ್ತು.
ಫೋಟೋವನ್ನು ಅನಾವರಣಗೊಳಿಸಿದ ನಂತರ ಅಲ್ಲಿದ್ದವರು ಸ್ವತಂತ್ರ ವೀರ ದಾಮೋದರ್ ಸಾವರ್ಕರ್ ಅವರಿಗೆ ಜಯವಾಗಲಿ, ಬೋಲೋ ಭಾರತ್ ಮಾತಾ ಕಿ ಜೈ ಎಂದು ಕೂಗಿದರು.