ರಾಜ್ಯ

ಬೆಂಗಳೂರು: ರೌಡಿಶೀಟರ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ನ್ಯಾಯಾಲಯ, ಬಂಧನ

Ramyashree GN

ಬೆಂಗಳೂರು: ಕ್ರಿಮಿನಲ್ ಪ್ರಕರಣದಲ್ಲಿ 45 ವರ್ಷದ ರೌಡಿ ಶೀಟರ್ ವಿರುದ್ಧ ನಗರದ ನ್ಯಾಯಾಲಯ ಬಂಧನ ವಾರಂಟ್ ಹೊರಡಿಸಿದ ನಂತರ ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

ಜ್ಞಾನಭಾರತಿ ಪ್ರದೇಶದಲ್ಲಿದ್ದ ಕಾರಿನಲ್ಲಿ ಬಚ್ಚಿಟ್ಟಿದ್ದ ಎರಡು ಕಂಟ್ರಿ ಮೇಡ್ ಪಿಸ್ತೂಲ್ ಹಾಗೂ ಮೂರು ಜೀವಂತ ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಮ್ಶೆಡ್ ಅಲಿಯಾಸ್ ಖಾನ್ ಎಂದು ಗುರುತಿಸಲಾದ ಶಸ್ತ್ರಾಸ್ತ್ರ ವ್ಯಾಪಾರಿಯಿಂದ ಅವರು ಮದ್ದುಗುಂಡುಗಳನ್ನು ಖರೀದಿಸಿದ್ದರು ಎನ್ನಲಾಗಿದೆ.

ಆರೋಪಿ ನ್ಯೂ ಗುರಪ್ಪನುಪಾಳ್ಯ ನಿವಾಸಿ ಸಮೀರುಲ್ಲಾ ಖಾನ್ ಅಲಿಯಾಸ್ ಸಮೀವುಲ್ಲಾ ಖಾನ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆರನೇ ಎಸಿಎಂಎಂ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಆಂಧ್ರಪ್ರದೇಶ ಪೊಲೀಸರಿಗೂ ಈ ರೌಡಿ ಶೀಟರ್ ಬೇಕಾಗಿದ್ದಾನೆ.

SCROLL FOR NEXT